ಗೌರಿಬಿದನೂರು : ನಗರದ ಬಜಾರ್ ರಸ್ತೆಯ ಪುರಾತನ ಬಸವೇಶ್ವರ ದೇವಾಲಯದಲ್ಲಿಬಸವ ಜಯಂತಿ ಪ್ರಯುಕ್ತ ಬಸವಣ್ಣನಿಗೆ ವಿಶೇಷ ಅಭಿಷೇಕ, ಪುಷ್ಪಾಲಂಕಾರ ಮಹಾಮಂಗಳಾರತಿ ನೆರವೇರಿಸಲಾಯಿತು. ನಗರದ ಮರಿಗಮ್ಮ ಸಲ್ಲಾಪುರಮ್ಮ ಸೇರಿದಂತೆ ವಿವಿಧ ಗ್ರಾಮ ದೇವತೆಗಳ ಸಂಪರ್ಕ ಈ ದೇವಾಲಯಕ್ಕೆ ಇದೆ ಎಂದು ಹಿರಿಯರು ಹೇಳುತ್ತಾರೆ. ಈ ನಿಟ್ಟಿನಲ್ಲಿವಷÜರ್ ಕ್ಕೊಂದು ಬಾರಿ ಗ್ರಾಮ ದೇವತೆಗಳಿಗೆ ಅನ್ನ ಶಾಂತಿ, ಕಾಯಿ ಶಾಂತಿ ಕಾರ್ಯಕ್ರಮಗಳನ್ನು ಈ ದೇವಾಲಯದ ಮುಂದೆ ಇಂದಿಗೂ ಹಮ್ಮಿಕೊಳ್ಳುತ್ತಾರೆ. ಪಾನಕ ಸೇವೆ : ಬಸವೇಶ್ವರ ಮೂರ್ತಿಗೆ ವಿಶೇ?Ü ಪೂಜೆ ಪುಷ್ಪಾಲಂಕಾರ ನಂತರ ಮಹಾಮಂಗಳಾರತಿ ನೆರೆವೇರಿ ಸಲಾಯಿತು . ಭಕ್ತಾದಿಗಳಿಗೆ ಪಾನಕ ಹೆಸರುಬೇಳೆ ಸೇವೆ ಹಮ್ಮಿಕೊಳ್ಳಲಾಗಿತ್ತು. ನಗರದ ಸಾರ್ವಜನಿಕರು ಹಾಗೂ ಹಿರಿಯರು ದೇವಾಲಯಕ್ಕೆ ಆಗಮಿಸಿ ಪುಷ್ಪನಮನ ಸಲ್ಲಿಸಿ ಬಸವಣ್ಣ ಮೂರ್ತಿಗೆ ನಮಿಸಿದರು. ಗೌರಿಬಿದನೂರಿನಲ್ಲಿಪ್ರತ್ಯೇಕ ಏಕೈಕ ಬಸವ ದೇವಾಲಯ ಇದಾಗಿದ್ದು ಬಸವ ಜಯಂತಿಗೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗುತ್ತದೆ.

