ಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಚಿತ್ರ:ತಾನಾಜಿ ಸಗರ್ , ಚಿತ್ರವಿದೆ ಬಳಸಿ
ಮಹರ್ಷಿ ಭಗೀರಥ ಜಯಂತಿ ನಾಳೆ
ಬೀದರ್ : ಶ್ರೀ ಗುರು ಮಹರ್ಷಿ ಭಗೀರಥ ಜಯಂತ್ಯುತ್ಸವ ಕಾರ್ಯಕ್ರಮ ಏ.23ರಂದು ನಡೆಯಲಿದೆ ಎಂದು ಜಿಲ್ಲಾಉಪ್ಪಾರ ಸಮಾಜ ಸಂಘದ ಗೌರವಾಧ್ಯಕ್ಷ ಜಗನ್ನಾಥ ಎಚ್ , ಅಧ್ಯಕ್ಷ ಡಾ. ತಾನಾಜಿ ಸಗರ, ಉಪಾಧ್ಯಕ್ಷ ಅನಿಲ ಪವಾರ್ , ಪ್ರಧಾನ ಕಾರ್ಯದರ್ಶಿ ಜಗನ್ನಾಥ ತಡಪಳ್ಳಿ ತಿಳಿಸಿದ್ದಾರೆ. ಬೀದರ್ ಜಿಲ್ಲಾಡಳಿತ ಮತ್ತು ಜಿಲ್ಲಾಉಪ್ಪಾರ ಸಂಘದಿಂದ ಕಾರ್ಯಕ್ರಮ ನಡೆಯಲಿದೆ. ಅಂದು ಬೆಳಗ್ಗೆ 8ಕ್ಕೆ ಭಗೀರಥ ಮಹರ್ಷಿ ಭಾವಚಿತ್ರದ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿಯಿಂದ ನಡೆಯಲಿದೆ. ದ್ವಿತೀಯ ಪಿಯುಸಿನಲ್ಲಿಶೇ. 85ಕ್ಕಿಂತ ಅಧಿಕ ಅಂಕ ಪಡೆದ ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ಸರ್ಕಾರದಿಂದ ಆಚರಿಸಲಾಗುವ ಶ್ರೀ ಭಗೀರಥ ಮಹರ್ಷಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿಸಮಾಜದ ಎಲ್ಲರೂ ಹಾಗೂ ಎಲ್ಲಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿಪಾಲ್ಗೊಳ್ಳಬೇಕು ಎಂದು ಜಿಲ್ಲಾಧ್ಯಕ್ಷ ಡಾ. ತಾನಾಜಿ ಸಗರ್ ಮನವಿ ಮಾಡಿದ್ದಾರೆ.

