ಮಧುಮೇಹಕ್ಕೆ ಸುಲಭ ಚಿಕಿತ್ಸೆ

Contributed bybabitha.salian@timesgroup.com|Vijaya Karnataka

ಆಧುನಿಕ ಜೀವನಶೈಲಿಯಿಂದ ಮಧುಮೇಹ ಹೆಚ್ಚುತ್ತಿದೆ. ರಕ್ತದಲ್ಲಿ ಸಕ್ಕರೆ ಹೆಚ್ಚಾಗುವುದೇ ಮಧುಮೇಹ. ಟೈಪ್ 1, ಟೈಪ್ 2, ಜೆಸ್ಟೇಷನಲ್‌ ಡಯಾಬಿಟೀಸ್‌ ವಿಧಗಳಿವೆ. ಬಾಯಾರಿಕೆ, ಅಧಿಕ ಮೂತ್ರ, ಹಸಿವು, ತೂಕ ಕಡಿಮೆಯಾಗುವುದು ಲಕ್ಷಣಗಳು. ಹೋಮಿಯೋಕೇರ್ ಇಂಟರ್‌ನ್ಯಾಷನಲ್‌ನ ಜೆನೆಟಿಕ್ ಕಾನ್ಸಿಟ್ಯೂಷನಲ್ ಚಿಕಿತ್ಸೆ ಮಧುಮೇಹಕ್ಕೆ ಪರಿಹಾರ ನೀಡುತ್ತದೆ. ಉಚಿತ ಸಮಾಲೋಚನೆ ಲಭ್ಯವಿದೆ.

best diet for diabetes simple and effective treatment options

ಮಧುಮೇಹಕ್ಕೆ ಸುಲಭ ಚಿಕಿತ್ಸೆ

ಆಧುನಿಕ ಜೀವನಶೈಲಿಯಿಂದಾಗಿ ಅನೇಕ ಜನರು ಮಧುಮೇಹಕ್ಕೆ ಗುರಿಯಾಗುತ್ತಿದ್ದಾರೆ. ಹೆಚ್ಚಿದ ಮಾನಸಿಕ ಒತ್ತಡ, ಬೊಜ್ಜು, ಕಲುಷಿತ ಪರಿಸರ, ಆಹಾರ ಪದ್ಧತಿ, ಸೂಕ್ತ ವ್ಯಾಯಾಮದ ಕೊರತೆ, ಆನುವಂಶಿಕ ಕಾರಣಗಳಿಂದಾಗಿ ಈ ರೋಗ ಎಲ್ಲಾ ವಯಸ್ಸಿನವರಲ್ಲೂಕಾಣಿಸುತ್ತಿದೆ. ಸಾಮಾನ್ಯವಾಗಿ ಡಯಾಬಿಟೀಸ್ ರಕ್ತದಲ್ಲಿಹೆಚ್ಚಾಗುವ ಸಕ್ಕರೆಯಿಂದಾಗಿ ಬರುತ್ತದೆ. ದೇಹದಲ್ಲಿರುವ ಪ್ಯಾಂಕ್ರಿಯಾಸ್ ಗ್ರಂಥಿಗೆ ದೇಹಕ್ಕೆ ಅಗತ್ಯವಿದ್ದಷ್ಟು ಇನ್ಸುಲಿನ್ ಉತ್ಪಾದಿಸಲು ಆಗದಿದ್ದಾಗ ಅಥವಾ ಶರೀರದ ಕಣಗಳು ಸಹಜವಾಗಿ ಇನ್ಸುಲಿನ್ ಹೀರಿಕೊಳ್ಳುವ ಪ್ರಕ್ರಿಯೆ ಹಾನಿಗೊಳಗಾದಾಗ ಮಧುಮೇಹ ಬರುತ್ತದೆ.

ಡಯಾಬಿಟೀಸ್ ವಿಧ

ಟೈಪ್ 1: ಇನ್ಸುಲಿನ್ ಆಧರಿತ ಈ ಡಯಾಬಿಟೀಸ್ ಪ್ಯಾಂಕ್ರಿಯಾಸ್ ಗ್ರಂಥಿಯಲ್ಲಿನ ವ್ಯಾಧಿಗಳಿಂದ ಮತ್ತು ವ್ಯಕ್ತಿಯ ಇಮ್ಯೂನಿಟಿ ಸಿಸ್ಟಮ್ ಪ್ಯಾಂಕ್ರಿಯಾಸ್ ನಲ್ಲಿನ ಬೀಟಾ ಕೋಶಗಳನ್ನು ನಾಶ ಮಾಡಿದಾಗ ಬರುತ್ತದೆ. ಇದು 20 ವರ್ಷದೊಳಗಿನವರಲ್ಲಿಹೆಚ್ಚು ಕಂಡುಬರುತ್ತದೆ.

ಟೈಪ್ 2: ಇನ್ಸುಲಿನ್ ಯೇತರ ಡಯಾಬಿಟೀಸ್ ಆಗಿರುವ ಇದು ಸಾಮಾನ್ಯವಾಗಿ 30 ವರ್ಷ ಮೇಲ್ಪಟ್ಟವರಲ್ಲಿಕಾಣಿಸಿಕೊಳ್ಳುತ್ತದೆ. ಉತ್ಪತ್ತಿಯಾದ ಇನ್ಸುಲಿನ್ ಸರಿಯಾಗಿ ಉಪಯೋಗವಾಗದಿದ್ದಲ್ಲಿ, ದೈಹಿಕ ವ್ಯಾಯಾಮದ ಕೊರತೆ, ಅಧಿಕ ಮಾನಸಿಕ ಒತ್ತಡ, ಅನುವಂಶಿಕ ಕಾರಣಗಳಿಂದ ಇದು ಬರುತ್ತದೆ.

ಟೈಪ್ 3: ಜೆಸ್ಟೇಷನಲ್ ಡಯಾಬಿಟೀಸ್ ಎನ್ನಲಾಗುವ ಇದು ಗರ್ಭಿಣಿಯರಲ್ಲಿಕಾಣಿಸಿಕೊಳ್ಳುತ್ತದೆ.

ಅನೇಕ ಲಕ್ಷಣ

ಬಾಯಾರಿಕೆ ಹೆಚ್ಚಾಗುವುದು, ಅಧಿಕ ಮೂತ್ರ ವಿಸರ್ಜನೆ, ಅಧಿಕ ಹಸಿವು, ಇದಕ್ಕಿದ್ದಂತೆ ತೂಕ ಕಡಿಮೆಯಾಗುವುದು, ಸುಸ್ತು, ಕೈ ಕಾಲು ನೋವು, ಗಾಯಗಳು ನಿಧಾನವಾಗಿ ಗುಣವಾಗುವುದು, ಲೈಂಗಿಕ ಬಯಕೆ ಕಡಿಮೆಯಾಗುವುದು, ಕೈ ಕಾಲು ಉರಿ ಮತ್ತು ಜೋಮು ಬರುವುದು ಮಧುಮೇಹದ ಲಕ್ಷಣಗಳಾಗಿವೆ.

ಹೋಮಿಯೋಕೇರ್ ಚಿಕಿತ್ಸೆ: ಹೋಮಿಯೋಕೇರ್ ಇಂಟರ್ ನ್ಯಾಷನಲ್ ನ ಜೆನೆಟಿಕ್ ಕಾನ್ಸಿ$್ಟಟ್ಯೂಷನಲ್ ಚಿಕಿತ್ಸೆಯಿಂದ ವ್ಯಕ್ತಿಯಲ್ಲಿನ ಡಯಾಬಿಟೀಸ್ ರೋಗ ಲಕ್ಷಣಗಳಿಗೆ ಹಾಗೆಯೇ ಅದರಿಂದಾಗುವ ಅನೇಕ ಪರಿಣಾಮಗಳಿಗೆ ಸಮರ್ಪಕ ಚಿಕಿತ್ಸೆ ನೀಡಲಾಗುತ್ತದೆ. ಈ ರೀತಿಯ ಯಾವುದೇ ಸಮಸ್ಯೆಗಳಿಂದ ನೀವು ಬಳಲುತ್ತಿದ್ದರೆ ನಮ್ಮ ಕ್ಲಿನಿಕ್ ಗೆ ಬಂದು ಚಿಕಿತ್ಸೆ ಪಡೆದು ನಿಮ್ಮ ಸಮಸ್ಯೆ ಪರಿಹರಿಸಿಕೊಳ್ಳಬಹುದು ಎಂದು ಈ ಸಂಸ್ಥೆಯ ತಜ್ಞರು ಹೇಳಿದ್ದಾರೆ.

ಹೋಮಿಯೋಕೇರ್ ಇಂಟರ್ ನ್ಯಾಷನಲ್ : ಕರ್ನಾಟಕದಲ್ಲಿನ ಶಾಖೆಗಳು ಬೆಂಗಳೂರು (ಜಯನಗರ, ಮಲ್ಲೇಶ್ವರ, ಇಂದಿರಾನಗರ, ಎಚ್ ಎಸ್ ಆರ್ ಲೇಔಟ್ ), ಮೈಸೂರು, ಹುಬ್ಬಳ್ಳಿ, ಮಂಗಳೂರು, ಬಳ್ಳಾರಿ, ದಾವಣಗೆರೆ, ಬೆಳಗಾವಿ, ಬಿಜಾಪುರ, ಬೀದರ್ , ಕಲಬುರಗಿ, ಶಿವಮೊಗ್ಗ, ತುಮಕೂರು, ಹಾಸನ. ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಪುದುಚೇರಿ.

ಉಚಿತ ಸಮಾಲೋಚನೆ: 9550001133, ಉಚಿತ ಕರೆಗೆ: 18001081212.

ಡಿಡಿಡಿ.hಟಞಛಿಟ್ಚa್ಟಛಿ.ಜ್ಞಿ

ಬಾಕ್ಸ್

ಉತ್ತಮ ಆಹಾರಾಭ್ಯಾಸ

-ಮಧುಮೇಹಿಗಳು ಅನ್ನ ಸೇವನೆಯ ಪ್ರಮಾಣ ಕಡಿಮೆ ಮಾಡಿ ಹೆಚ್ಚು ಪ್ರೊಟೀನ್ ಇರುವ ಗೋಧಿ, ಜೋಳ ಬಳಸಬಹುದು.

-ತರಕಾರಿಗಳಲ್ಲಿಅತ್ಯಧಿಕ ಪ್ರಮಾಣದ ನೀರು ಹಾಗೂ ಅತಿ ಕಡಿಮೆ ಕ್ಯಾಲೊರಿ ಇರುತ್ತವೆ. ನುಗ್ಗೆ ಸೊಪ್ಪು, ಪುದೀನ, ದಂಟು, ಪಾಲಕ್ , ಹರಿವೆ, ಮೆಂತ್ಯೆ ಮುಂತಾದ ಸೊಪ್ಪು ತರಕಾರಿಗಳು ಜೀವಸತ್ವ ಹಾಗೂ ಖನಿಜಗಳ ಮೂಲ. ಇವುಗಳಲ್ಲಿಕ್ಯಾಲ್ಷಿಯಂ, ಕಬ್ಬಿಣ, ವಿಟಮಿನ್ ಎ ಮತ್ತು ಸಿ ಅಧಿಕವಾಗಿ ದೊರೆಯುತ್ತವೆ.

-ಹಣ್ಣುಗಳನ್ನು ಹಸಿಯಾಗಿಯೇ ತಿನ್ನಬೇಕು. ದುಬಾರಿ ಹಣ್ಣುಗಳಿಗಿಂತ ಸ್ಥಳೀಯವಾಗಿ ಸಿಗುವ ಪಪ್ಪಾಯಿ, ಸೀಬೆ, ನೇರಳೆ, ಕಿತ್ತಳೆ, ಬಾಳೆ ಉತ್ತಮ ಪೋಷಕಾಂಶ ಕೊಡುತ್ತವೆ.