ಬಸ್ ಗೆ ಡಿಕ್ಕಿ; ಓರ್ವ ಸಾವು
ಭಾಲ್ಕಿ: ತಾಲೂಕಿನ ಮೈಲಾರ ಸಮೀಪ ಬೀದರ್ ನಿಂದ ಭಾಲ್ಕಿ ಕಡೆಗೆ ಹೊರಟಿದ್ದ ಕೆಕೆಆರ್ ಟಿಸಿ ಬಸ್ ಗೆ ಹಿಂದಿನಿಂದ ಬಂದ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಗೂಡ್ಸ್ ವಾಹನ ಚಾಲಕ ಮೃತಪಟ್ಟ ಘಟನೆ ನಡೆದಿದೆ. ಪ್ರಕಾಶ ವೈಜನಾಥ (30) ಮೃತ ಚಾಲಕ. ಇನ್ನೋರ್ವ ಶಿವಕುಮಾರ ಅಶೋಕ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಬೀದರ್ ನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಕ್ಕಿಯ ಹೊಡೆತಕ್ಕೆ ಗೂಡ್ಸ್ ವಾಹನದ ಮುಂಭಾಗ ಬಸ್ ಹಿಂಭಾಗದ ಒಳಗಡೆ ಸಿಲುಕಿಕೊಂಡಿದೆ. ಬಸ್ ಹಿಂಭಾಗ ಕುಳಿತಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಸಂಬಂಧ ಧನ್ನೂರ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

