ಬೆಳ್ಳೂರು: ಕುಳದ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಏ.22, 23ರಂದು ಜರುಗಲಿದೆ. 22ರಂದು ರಾತ್ರಿ 7ಕ್ಕೆ ಕುಳ ದೈವಸ್ಥಾನದಿಂದ ಕುಳದಪಾರೆಗೆ ಭಂಡಾರ ಹೊರಡುವುದು, 8ಕ್ಕೆ ಮೇಲೇರಿಗೆ ಅಗ್ನಿ ಸ್ಪರ್ಶ, 8.30ರಿಂದ ಕುಳದಪಾರೆ ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ ್ಯಕ್ರಮ, 9ರಿಂದ ಊರವರಿಂದ ನೃತ್ಯ ವೈವಿಧ್ಯ, 11ರಿಂದ ಶ್ರೀ ವಿಷ್ಣುಮೂರ್ತಿ ದೈವದ ಕುಳ್ಚಾಟ, ತಡರಾತ್ರಿ 1ರಿಂದ ಸುಳ್ಯಪದವು ಮಹಾವಿಷ್ಣು ಯಕ್ಷಗಾನ ಕಲಾ ಸಂಘದಿಂದ ವಿದ್ಯುನ್ಮತಿ ಕಲ್ಯಾಣ ಯಕ್ಷಗಾನ ಬಯಲಾಟ, 23ರಂದು ಮುಂಜಾನೆ 5ರಿಂದ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿ ಸೇವೆ, ಬೆಳಗ್ಗೆ 7ರಿಂದ ಅರಸಿನ ಪ್ರಸಾದ ಸ್ವೀಕಾರ ನಡೆಯಲಿದೆ.

