25ಕ್ಕೆ ವಿಶೇಷ ಯಕ್ಷಗಾನ ತಾಳಮದ್ದಳೆ
ಸಾಗರ: ವೇದನಾದ ಪ್ರತಿಷ್ಠಾನ ಹಾಗೂ ಶ್ರೀಸದ್ಗುರು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ವಿದ್ಯಾಲಯದಿಂದ ಏ.25ರಂದು ಸಂಜೆ 6 ಗಂಟೆಗೆ ನಗರದ ಕುಡಪಲಿ ಸದಾನಂದ ಸಭಾಭವನದಲ್ಲಿವಿಶೇಷ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿಕವಿ ಗೋಪಾಲಕೃಷ್ಣ ಅಡಿಗ ಅವರ ಪ್ರಸಿದ್ಧ ಕವಿತೆ ‘ಮೋಹನ ಮುರಳಿ’ ಆಧಾರಿತ ಕಾವ್ಯಾನುಸಂಧಾನ ನಡೆಯಲಿದೆ. ಕಾರ್ಯಕ್ರಮದ ಪರಿಕಲ್ಪನೆಯನ್ನು ದೇವೇಂದ್ರ ಬೆಳೆಯೂರು ರೂಪಿಸಿದ್ದು, ಸಂಗೀತ ಸಂಯೋಜನೆಯನ್ನು ಸಂವತ್ಸರ ನೀಡಿದ್ದಾರೆ. ಭಾಗವತರಾಗಿ ಮಂಜುನಾಥ ಕೆಳಮನೆ ಮತ್ತು ಸಂವತ್ಸರ ಸಾಗರ ಭಾಗವಹಿಸಲಿದ್ದಾರೆ. ಮದ್ದಳೆಯನ್ನು ಮಂಜುನಾಥ ಗುಡ್ಡೆದಿಂಬ ವಾದಿಸಲಿದ್ದು, ಚೆಂಡೆಯನ್ನು ಶ್ರೀವತ್ಸ ಗುಡ್ಡೆದಿಂಬ ನಿರ್ವಹಿಸಲಿದ್ದಾರೆ. ಅರ್ಥಧಾರಿಯಾಗಿ ದೇವೇಂದ್ರ ಬೆಳೆಯೂರು ಪಾಲ್ಗೊಳ್ಳಲಿದ್ದಾರೆ.

