ನಗರ ಯೋಜನಾ ಅಧಿಕಾರಿ ಭ್ರಷ್ಟಾಚಾರ : ಅಮಾನತ್ತಿಗೆ ಆಗ್ರಹ
ವಿಕ ಸುದ್ದಿಲೋಕ ಲಿಂಗಸುಗೂರು
*ಇಲ್ಲಿನ ನಗರ ಯೋಜನಾ ಅಧಿಕಾರಿ ಶರಣಪ್ಪ ಮಡಿವಾಳ ವಿರುದ್ಧ ಭ್ರಷ್ಟಾಚಾರದ ಪ್ರಕರಣ ದಾಖಲಿಸಿ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕು.* ಎಂದು ಕರ್ನಾಟಕ ನಾಯಕ ಒಕ್ಕೂಟ ಸಂಘಟನೆ ಪದಾಧಿಕಾರಿಗಳು ಆಗ್ರಹಿಸಿದರು.
ಸಹಾಯಕ ಆಯುಕ್ತ ಬಸವಣ್ಣೆಪ್ಪ ಕಲಶೆಟ್ಟಿಯವರಿಗೆ ಮಂಗಳವಾರ ಮನವಿ ಸಲ್ಲಿಸಿದ ಅವರು, *ನಗರ ಯೋಜನಾ ಅಧಿಕಾರಿ ಸಣ್ಣಪುಟ್ಟ ಕೆಲಸಗಳಿಗೂ ಹಣ ನೀಡಬೇಕು. ಇಲ್ಲದಿದ್ದರೆ ಕಚೇರಿಗೆ ಅಲೆದಾಡಬೇಕು. ಸಚಿವರ ಹೆಸರನ್ನು ಬಳಸಿಕೊಂಡು ವ್ಯಕ್ತಿಯೊಬ್ಬರಿಂದ 3 ಲಕ್ಷ ರೂಪಾಯಿ ಹಣದ ಬೇಡಿಕೆ ಇಟ್ಟಿದ್ದ ವಿಡಿಯೋ ಜಾಲತಾಣದಲ್ಲಿವೈರಲ್ ಆಗಿದೆ. ಈ ಬಗ್ಗೆ ಪ್ರಶ್ನೆ ಮಾಡಿದವರಿಗೆ ಗೂಂಡಾಗಳಿಂದ ಬೆದರಿಕೆ ಕರೆ ಮಾಡಿಸುತ್ತಿದ್ದಾರೆ. ಹಣ ಕೊಟ್ಟರೆ ನಿಯಮ ಬಾಹಿರ ಕೆಲಸಗಳನ್ನು ಸಲೀಸಾಗಿ ಮಾಡುತ್ತಾರೆ. ಇಂಥಹ ಭ್ರಷ್ಟ ಅಧಿಕಾರಿಯನ್ನು ಕೂಡಲೇ ಅಮಾನತ್ತುಗೊಳಿಸಬೇಕು.* ಎಂದು ಒತ್ತಾಯಿಸಿದರು.
ಸಂಘಟನೆ ಅಧ್ಯಕ್ಷ ಮಹಾಂತೇಶ ನಾಯಕ, ಮುಖಂಡರಾದ ಶ್ರೀಮಂತ ದೇಗಲಮಡಿ, ಬಾಲು ನಾಯಕ ಹಂಚಿನಾಳ, ಸಾಬಣ್ಣ ಯಲಗಟ್ಟಿ, ನವೀನಕುಮಾರ, ಶಶಿಕುಮಾರ, ಖಾಲಿದ್ ಚಾವೂಸ್ ಸೇರಿ ಇತರರಿದ್ದರು.
21ಆರ್ ಸಿಹೆಚ್ ಎಲ್ ಎನ್ ಜಿ-2. ಲಿಂಗಸುಗೂರು ಪಟ್ಟಣದಲ್ಲಿಎಸಿ ಕಲಶೆಟ್ಟಿಯವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

