ಕ್ವಿಕ್ ನ್ಯೂಸ್ ನ್ಯೂ

Contributed byshree vijendra|Vijaya Karnataka

ಪ್ರಧಾನಿ ಮೋದಿ ಪಶ್ಚಿಮ ಬಂಗಾಳದಲ್ಲಿ ಚುರುಮುರಿ ಸವಿದ ವಿಡಿಯೊ ವೈರಲ್ ಆಗಿದೆ. ದಿಲ್ಲಿಯಲ್ಲಿ ದಕ್ಷಿಣ ಕೊರಿಯಾ ಅಧ್ಯಕ್ಷರೊಂದಿಗೆ ದೊಡ್ಡ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಉನ್ನಾವೋ ಸಂತ್ರಸ್ತೆ ತಂದೆ ಸಾವಿನ ಪ್ರಕರಣದಲ್ಲಿ ಅಪರಾಧಿಗಳಿಗೆ ಶಿಕ್ಷೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ ಆಗಿದೆ. ಅಸ್ಸಾಂ ಗುಂಪು ಹತ್ಯೆ ಪ್ರಕರಣದಲ್ಲಿ 20 ಮಂದಿಗೆ ಶಿಕ್ಷೆ ವಿಧಿಸಲಾಗಿದೆ. ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರಕ್ಕೆ ತೆರೆ ಬಿದ್ದಿದೆ. ರಾಜಸ್ಥಾನದಲ್ಲಿ ತೈಲ ಸಂಸ್ಕರಣಾ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿದೆ.

pm modis viral snack video delhi high court discussions unnao cases and election campaigns

- ಪಶ್ಚಿಮ ಬಂಗಾಳದಲ್ಲಿಚುನಾವಣೆ ಪ್ರಚಾರದ ಮಧ್ಯೆ ರಸ್ತೆ ಬದಿ ಅಂಗಡಿಯಲ್ಲಿಚುರುಮುರಿ ಸವಿದ ಪ್ರಧಾನಿ ಮೋದಿ ವಿಡಿಯೊ 24 ಗಂಟೆಯಲ್ಲಿ1 ಕೋಟಿ ವೀಕ್ಷಣೆ ಪಡೆದಿದೆ

- ದಿಲ್ಲಿಯಲ್ಲಿದಕ್ಷಿಣ ಕೊರಿಯಾ ಅಧ್ಯಕ್ಷ ಲೀ ಜೇ ಮಯುಂಗ್ ಜತೆ ಪ್ರಧಾನಿ ಮೋದಿ ಚರ್ಚೆ, 50 ಬಿಲಿಯನ್ ಡಾಲರ್ ವ್ಯಾಪಾರ ಒಪ್ಪಂದಕ್ಕೆ ಉಭಯ ನಾಯಕರು ಸಹಿ

- ಉನ್ನಾವೋ ಸಂತ್ರಸ್ತೆ ತಂದೆ ಸಾವಿನ ಕೇಸ್ ನ ಅಪರಾಧಿ ಕುಲದೀಪ್ ಸಿಂಗ್ ಸೆಂಗಾರ್ ಸೇರಿ 6 ದೋಷಿಗಳಿಗೆ ಗರಿಷ್ಠ ಶಿಕ್ಷೆ ಕೋರಿ ಸಂತ್ರಸ್ತೆ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ದಿಲ್ಲಿಹೈಕೋರ್ಟ್

- 2018ರಲ್ಲಿಅಸ್ಸಾಂನ ಪಂಜೂರಿ ಎಂಬಲ್ಲಿನಡೆದ ಇಬ್ಬರು ವ್ಯಕ್ತಿಗಳ ಗುಂಪು ಹತ್ಯೆ ಪ್ರಕರಣದಲ್ಲಿ20 ಆರೋಪಿಗಳಿಗೆ ಶಿಕ್ಷೆ ವಿಧಿಸಿದ ಅಸ್ಸಾಂ ಕೋರ್ಟ್ , 25 ಆರೋಪಿಗಳು ಖುಲಾಸೆ

- ತಮಿಳುನಾಡು ವಿಧಾನಸಭೆ ಚುನಾವಣೆ ಹಾಗೂ ಪಶ್ಚಿಮ ಬಂಗಾಳ ಚುನಾವಣೆಯ ಮೊದಲ ಹಂತದ ಬಹಿರಂಗ ಪ್ರಚಾರಕ್ಕೆ ಮಂಗಳವಾರ (ಏ.21) ತೆರೆ

- ಪ್ರಧಾನಿ ಮೋದಿ ಅವರಿಂದ ಏ.21ರ ಮಂಗಳವಾರ ಉದ್ಘಾಟನೆಗೊಳ್ಳಬೇಕಿದ್ದ ರಾಜಸ್ಥಾನದ ಬಲ್ತೋರಾ ಜಿಲ್ಲೆಯ ತೈಲ ಸಂಸ್ಕರಣಾ ಘಟಕದಲ್ಲಿಅಗ್ನಿ ಅವಘಡ