ವಿಕ ಸುದ್ದಿಲೋಕ ಅರಟಾಳ
ಸಮೀಪದ ಬಾಡಗಿ ಗ್ರಾಮದ ಹನುಮಾನ ದೇವರ ಜಾತ್ರೆ ಏ.29ರಂದು ಆರಂಭವಾಗಿದ್ದು, ಮೇ 4ರ ವರೆಗೆ ಜರುಗಲಿದೆ.
30 ರಂದ ಸಂಜೆ 7 ಗಂಟೆಗೆ ಜಾತ್ರೆ ಉದ್ಘಾಟನೆ ಕಾರ್ಯಕ್ರಮದ ಸಾನ್ನಿಧ್ಯವನ್ನು ಚಿಂಚಣಿ ಶಿವಪ್ರಸಾದ ಮಹಾಸ್ವಾಮಿಗಳು ವಹಿಸುವರು. ಶಾಸಕ ಲಕ್ಷತ್ರ್ಮಣ ಸವದಿ ಉದ್ಘಾಟಿಸುವರು. ರಾತ್ರಿ 9 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗುವುದು.
ಮೇ 1 ರಂದು ಬೆಳಗ್ಗೆ 7 ಗಂಟೆಗೆ ಓಟ ಸ್ಪರ್ಧೆ, 9 ಗಂಟೆಗೆ ಭಜನೆ, ಸಂಜೆ 5 ಗಂಟೆಗೆ ಓಕುಳಿ ಕೊಂಡ ತೆಗೆಯುವುದು, ನಂತರ ಮಹಾಪ್ರಸಾದ. ರಾತ್ರಿ 10 ಗಂಟೆಗೆ ಹಾಸ್ಯಕಾರ್ಯಕ್ರಮ ಜರುಗುವುದು. ಮೇ 2 ರಂದು ದೀರ್ಘದಂಡ ನಮಸ್ಕಾÃ, ಬೆಳಗ್ಗೆ 9 ಗಂಟೆಗೆ ಹೊಂಡ ತುಂಬುವುದು. ಮಧ್ಯಾಹ್ನ 12.30ಕ್ಕೆ ದೇವರಿಗೆ ಮಹಾನೈವೇದ್ಯ, ಸಂಜೆ 5 ಗಂಟೆಗೆ ನೀರೋಕುಳಿ, ಬಳಿಕ ಪಲ್ಲಕ್ಕಿ ಉತ್ಸವ ಹಾಗೂ ಗೊಂಬೆ ಕುಣಿತ, ಸಂಜೆ 6 ಗಂಟೆಗೆ ಮಹಾಪ್ರಸಾದ ಇರುವುದು. ರಾತ್ರಿ 10 ಗಂಟೆಗೆ ಶ್ರೀಕೃಷ್ಣ ಪಾರಿಜಾತ ಬಯಲಾಟ ಪ್ರದರ್ಶನವಿದೆ.
ಮೇ 3 ರಂದು ಬೆಳಗ್ಗೆ 9 ಗಂಟೆಗೆ ಸಂಗ್ರಾಮ ಕಲ್ಲುಎತ್ತುವ ಹಾಗೂ ಚೀಲ ಎತ್ತುವ ಸ್ಪರ್ಧೆ ಜರುಗುವವು. 10 ಗಂಟೆಗೆ ಕೆಸರೋಕುಳಿ, ಸಂಜೆ 4 ಗಂಟೆಗೆ ಅಂತಾರಾಜ್ಯ ಜಂಗೀ ನಿಕಾಲಿ ಕುಸ್ತಿ ಸ್ಪರ್ಧೆ ನಡೆಯಲಿದೆ. ರಾತ್ರಿ 10 ಗಂಟೆಗೆ ‘ಮಗ ಹೋದರೂ ಮಾಂಗಲ್ಯ ಬೇಕು’ ಸಾಮಾಜಿಕ ನಾಟಕ ಪ್ರದರ್ಶನವಿದೆ. ಮೇ 4 ರಂದು ಸಂಜೆ ಕಂಬ ಇಳಿಸುವ ಮೂಲಕ ಜಾತ್ರೆ ಸಂಪನ್ನಗೊಳ್ಳಲಿದೆ ಎಂದು ಜಾತ್ರಾ ಕಮಿಟಿ ತಿಳಿಸಿದೆ.
ಪೋಟೋ 29ಅರಟಾಳ1: ಹನುಮಾನ ದೇವರು.

