ಮುಂಬಯಿ: ಕಲ್ಲಂಗಡಿ ಹಣ್ಣು ಸೇವಿಸಿ ಅನುಮಾನಸ್ಪದವಾಗಿ ಮೃತಪಟ್ಟ ಒಂದೇ ಕುಟುಂಬದ ನಾಲ್ವರ ಸಾವಿನ ಪ್ರಕರಣದ ನಿಗೂಢತೆ ಇನ್ನೂ ಮುಂದುವರಿದಿದೆ. ಪ್ರಾಥಮಿಕ ಮೂಲಗಳ ಪ್ರಕಾರ ಕಲ್ಲಂಗಡಿ ಹಣ್ಣಿನ ಫುಡ್ ಪಾಯ್ಸನ್ ನಿಂದ ಸಾವಿಗೀಡಾರುವ ಶಂಕೆ ವ್ಯಕ್ತವಾಗಿದೆ.
ನಾಲ್ವರ ಮರಣೋತ್ತರ ವರದಿ ನಿರೀಕ್ಷಿಸಲಾಗಿದ್ದು, ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏಪ್ರಿಲ್ 25 ರಂದು ಮನೆಯಲ್ಲಿನಡೆದ ಕಾರ್ಯಕ್ರಮ ಒಂದರಲ್ಲಿಮೃತ ಅಬ್ದುಲ್ಲಾ, ಪತ್ನಿ ನಸ್ರೀನ್ , ಮಕ್ಕಳಾದ ಆಯೇಷಾ, ಜೈನಾಬ್ ಅವರು ಬಿರ್ಯಾನಿ ಸೇವಿಸಿದ್ದರು. ರಾತ್ರಿ 10.30ರ ಬಳಿಕ ಕಲ್ಲಗಂಡಿ ಹಣ್ಣು ಸೇವಿಸಿ ಮಲಗಿದ್ದರು. ಏಪ್ರಿಲ್ 26ರ ಮುಂಜಾನೆ ವೇಳೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಕೂಡಲೇ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ನಾಲ್ವರು ಮೃತಪಟ್ಟಿದ್ದರು.

