ಕಾರವಾರ ರೌಡಿ ಗಡಿಪಾರು
ಕಾರವಾರ:ಇಲ್ಲಿನ ನಗರ ಠಾಣೆ ವ್ಯಾಪ್ತಿಯ ಕಳಸವಾಡ, ಬಾಡದ ನಿವಾಸಿ ಸೂರ್ಯಕಾಂತ (ಜ್ಯಾಕ್ ಕಳಸ) ಅನ್ನು ಆರು ತಿಂಗಳ ಮಟ್ಟಿಗೆ ಚಿಕ್ಕಮಗಳೂರು ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.
ಆರೋಪಿ ವಿರುದ್ಧ ವಿವಿಧ ಅಪರಾಧದ ಏಳು ಪ್ರಕರಣಗಳು ದಾಖಲಾಗಿವೆ. ಆದರೂ ಕ್ರಿಮಿನಲ್ ಚಟುವಟಿಕೆ ಮುಂದುವರಿಸಿದ ಹಿನ್ನೆಲೆಯಲ್ಲಿಗಡಿಪಾರಿಗೆ ಶಿಫಾರಸು ಮಾಡಲಾಗಿತ್ತು. ಆ ಹಿನ್ನೆಲೆಯಲ್ಲಿಉತ್ತರ ಕನ್ನಡ ಎಸ್ ಪಿ ಅವರು ಆರೋಪಿ ಸೂರ್ಯಕಾಂತನನ್ನು ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಠಾಣೆ ವ್ಯಾಪ್ತಿಗೆ ಆರು ತಿಂಗಳವರೆಗೆ ಗಡಿಪಾರು ಮಾಡಿ ಆದೇಶಿಸಿದ್ದಾರೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

