ಬೆಂಜನಪದವು ಸರಕಾರಿ ಪರ್ಪೂ ಕಾಲೇಜಿನಲ್ಲಿಮಾಹಿತಿ ಕಾರಾರ ಯಗಾರ

Contributed byyadavvkbantwal@gmail.com|Vijaya Karnataka
information workshop guiding students
ಬಿ.ಸಿ.ರೋಡ್ : ಬೆಂಜನಪದವು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿವಿದ್ಯಾರ್ಥಿಗಳಿಗಾಗಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿನಡೆಸಲಾಗುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಹಾಗೂ ಬದುಕಿನ ಗುರಿ ನಿಗದಿಪಡಿಸಿಕೊಳ್ಳುವ ಕುರಿತು ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಸತೀಶ್ ಮರಾಠೆ ಬಿಳಿನೆಲೆ ಅವರಿಂದ ಮಾಹಿತಿ ಕಾರ್ಯಕ್ರಮ ನಡೆಯಿತು.

ವಿದ್ಯಾರ್ಥಿಗಳಿಗೆ ತಮ್ಮ ಶಕ್ತಿ ಹಾಗೂ ಮಿತಿಗಳನ್ನು ಗುರುತಿಸಿಕೊಳ್ಳುವ ಚಟುವಟಿಕೆ ಮಾಡಿಸಿ, ಅವರು ತಮ್ಮನ್ನು ತಾವು ಅರಿತುಕೊಳ್ಳುವಂತೆ ಪ್ರೇರಣೆ ನೀಡಲಾಯಿತು.
ಪ್ರಿನ್ಸಿಪಾಲ್ ಕವಿತಾ ಅಧ್ಯಕ್ಷತೆ ವಹಿಸಿದ್ದರು. ಆಂಗ್ಲಭಾಷಾ ಉಪನ್ಯಾಸಕ ರಾಧೇಶ ತೋಳ್ಪಾಡಿ ಎಸ್ . ಕಾರ್ಯಕ್ರಮ ನಿರೂಪಿಸಿದರು. ಗಣಿತಶಾಸ್ತ್ರ ಉಪನ್ಯಾಸಕ ರವಿಚಂದ್ರ ಮಯ್ಯ ವಂದಿಸಿದರು.

ಫೊಟೋ: 15ವೈಎ ಬೆಂಜನಪದವು