ಗ್ರಾಮದ ಅಭಿವೃದ್ಧಿಗೆ ಆಗ್ರಹ

Contributed bypuneetkumar24b1988@gmail.com|Vijaya Karnataka
public signature movement for village development
* ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರ್ವಜನಿಕರಿಂದ ಸಹಿ ಸಂಗ್ರಹ ಚಳವಳಿ

ಗ್ರಾಮದ ಅಭಿವೃದ್ಧಿಗೆ ಆಗ್ರಹ
ವಿಕ ಸುದ್ದಿಲೋಕ ಸಿರಿಗೇರಿ

ಜ್ವಲಂತ ಸಮಸ್ಯೆಗಳಲ್ಲಿಒಂದಾದ ಹೃದಯ ಭಾಗದಲ್ಲಿರುವ ಪುರಾತನ ಊರುಕೆರೆ ಅಭಿವೃದ್ಧಿ ಮತ್ತು ಸರಕಾರಿ ಪ್ರಾಥಮಿಕ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವಂತೆ ಸಾರ್ವಜನಿಕರಿಂದ ಸಹಿ ಸಂಗ್ರಹ ಚಳವಳಿ ಹಮ್ಮಿಕೊಳ್ಳಲಾಯಿತು.

ಈ ವೇಳೆ ಸಾಮಾಜಿಕ ಹೋರಾಟಗಾರ, ವಕೀಲ ಬಿ. ರಾಮಬಾಬು ಮಾತನಾಡಿ, ‘‘ಸುಮಾರು ವರ್ಷಗಳಿಂದ ಉಪವಾಸ ಸತ್ಯಾಗ್ರಹ, ಪ್ರತಿಭಟನೆಗಳು, ಮನವಿಗಳು ನೀಡಿದರೂ ಪ್ರಯೋಜನ ಆಗಿಲ್ಲ. ಈ ಕುರಿತು ಸಂಬಂಧಪಟ್ಟ ಶಾಸಕರಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದನೆ ದೊರಕಿಲ್ಲ. ಊರುಕೆರೆ ಅಭಿವೃದ್ಧಿಯಾಗದೆ ಸಾಂಕ್ರಾಮಿಕ ರೋಗಗಳಿಗೆ ಎಡೆ ಮಾಡಿಕೊಟ್ಟಿದೆ. 26 ಹಳ್ಳಿಗಳಿಗೆ ಬೇಕಾದ ಸರಕಾರಿ ಆಸ್ಪತ್ರೆಯಲ್ಲಿವೈದ್ಯರ ಕೊರತೆ, ಸಿಬ್ಬಂದಿ ಕೊರತೆ, ಗರ್ಭಿಣಿಯರಿಗೆ ಬೆಡ್ ಗಳ ವ್ಯವಸ್ಥೆ ಹೀಗೆ ಮೂಲ ಸೌಲಭ್ಯಗಳಿಲ್ಲ. ಅವುಗಳ ಪರಿಹಾರಕ್ಕಾಗಿ ಸಹಿ ಸಂಗ್ರಹ ಮಾಡುತ್ತಿದ್ದೇವೆ,’’ ಎಂದರು.

ಪ್ರಮುಖರಾದ ಬಕಾಡೆ ಈರಯ್ಯ, ಬಸರ್ ಕೊಡು ಉಮೇಶ್ , ವಿ.ಹನುಮೇಶ್ , ಶ್ರೀರಾಮ್ , ಬಿ.ನಾಗರಾಜ್ , ಗುಡಟ್ಟಿ ಈರಣ್ಣ, ವಸ್ತ್ರದ ಮಂಜುನಾಥ್ , ಹಳ್ಳಿಮರ ನಾಗರಾಜ್ , ಹಳ್ಳಿಮರದ ಚಂದ್ರ, ರಾಮ, ಕೊಳ್ಳಿ ಶೇಖರ್ , ಹನುಮಂತ, ಹಳ್ಳಿ ಮರದ ವೀರೇಶ್ , ಎನ್ . ಕುಮಾರ್ , ಆಟೊ ಕರೀಂ, ಆಲಂಬಾಷಾ, ವಕೀಲರಾದ ಸುರೇಶ್ , ಶೇಖಪ್ಪ, ಕಲ್ಗುಡಿ ಚಂದ್ರಶೇಖರ್ , ಗಾದಿಲಿಂಗಪ್ಪ, ಸದ್ದಾಂ ಹುಸೇನ್ , ಗ್ರಾಮದ ಮುಖಂಡರು, ಯುವಕರು ಭಾಗವಹಿಸಿದ್ದರು.

23 ಸಿರಿಗೇರಿ 02 ಫೋಟೋ

ಸಿರಿಗೇರಿ ಗ್ರಾಮದ ಊರು ಕೆರೆಯ ಅಭಿವೃದ್ಧಿ ಮತ್ತು ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸುವಂತೆ ಸಾರ್ವಜನಿಕರ ಸಹಿ ಸಂಗ್ರಹ ನಡೆಯಿತು.