ಹಿರಿಯರ ಮಾರ್ಗದರ್ಶನ ದಾರಿದೀಪ

Contributed byvijaya.poojary@timesgroup.com|Vijaya Karnataka
guidance of elders for societal development
ವಿಕ ಸುದ್ದಿಲೋಕ ಮಂಗಳೂರು

ಹಿರಿಯರನ್ನು ಗೌರವಿಸುವುದು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿದೆ. ಅವರ ಅನುಭವ ಹಾಗೂ ಮಾರ್ಗದರ್ಶನ ಉತ್ತಮ ಸಮಾಜ ನಿರ್ಮಾಣಕ್ಕೆ ದಾರಿದೀಪ ಎಂದು ರೋಟರಿ ಸಂಧ್ಯಾ ಸುರಕ್ಷಾ ಜಿಲ್ಲಾಯೋಜನೆಯ ಚೇರ್ಮನ್ ಅನಿಲ್ ರಾವ್ ಹೇಳಿದರು.
ರೋಟರಿ ಜಿಲ್ಲೆ3181, ದ.ಕ. ಜಿಲ್ಲಾರೆಡ್ ಕ್ರಾಸ್ ಸೊಸೈಟಿ ಮತ್ತು ಮಂಥನ ಓಜಸ್ ಎನ್ ಜಿಒ ಟ್ರಸ್ಟ್ ವತಿಯಿಂದ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಭಾನುವಾರ ರೆಡ್ ಕ್ರಾಸ್ ನ ಪ್ರೇರಣಾ ಸಭಾಂಗಣದಲ್ಲಿಹಿರಿಯ ನಾಗರಿಕರಿಗೆ ಏರ್ಪಡಿಸಿದ್ದ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾರೆಡ್ ಕ್ರಾಸ್ ಸೊಸೈಟಿಯ ಆಡಳಿತ ಮಂಡಳಿ ನಿರ್ದೇಶಕ ಪಿ.ಬಿ.ಹರೀಶ್ ರೈ ಮುಖ್ಯ ಅತಿಥಿಯಾಗಿದ್ದರು. ಮಂಥನ ಓಜಸ್ ಟ್ರಸ್ಟ್ ನ ಗೌರವಾಧ್ಯಕ್ಷ ನಂದ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸ್ಪರ್ಧೆಗಳ ತೀರ್ಪುಗಾರರಾಗಿ ಪ್ರತಿಭಾ ಸಾಲಿಯನ್ , ಸ್ವರ್ಣಶ್ರೀ, ಲತಾ ಕೆ. ಮತ್ತು ತನ್ಮಯ್ ಭಾಗವಹಿಸಿದ್ದರು. ಮಂಥನ ಓಜಸ್ ಟ್ರಸ್ಟ್ ನ ಸಂಸ್ಥಾಪಕಿ ಮಂಗಳಾ ನಂದಕುಮಾರ್ ಕಾರ್ಯಕ್ರಮ ನಿರೂಪಿಸಿದರು.

23ಎಂಎನ್ ಜಿ-ರೆಡ್ ಕ್ರಾಸ್

ರೆಡ್ ಕ್ರಾಸ್ ನ ಪ್ರೇರಣಾ ಸಭಾಂಗಣದಲ್ಲಿಹಿರಿಯ ನಾಗರಿಕರಿಗೆ ಸ್ಪರ್ಧೆ ನಡೆಯಿತು.