ನವಲಗುಂದ

Contributed byhuchappabhovi@gmail.com|Vijaya Karnataka
navalagunda 15 nvl 1 model area construction priority mla nh konaraddi
15-ಎನ್ ವಿಎಲ್ -1

ಮಾದರಿ ಕ್ಷೇತ್ರ ನಿರ್ಮಾಣಕ್ಕೆ ಆದ್ಯತೆ: ಶಾಸಕ ಎನ್ .ಎಚ್ .ಕೋನರಡ್ಡಿ
ನವಲಗುಂದ ಕ್ಷೇತ್ರದ ಅಭಿವೃದ್ಧಿಗೆ 800 ಕೋಟಿ

ವಿಕ ಸುದ್ದಿಲೋಕ ನವಲಗುಂದ

ಸರಕಾರ ತನ್ನ 6ನೇ ಗ್ಯಾರಂಟಿ ಘೋಷಣೆ ಮಾಡುವ ಮೂಲಕ ಸಾವಿರ ಕೋಟಿ ರೂ.ಗಳ ಅನುದಾನದಲ್ಲಿಭಾರತ್ ಜೋಡೊ ಸಂಘಗಳನ್ನು ರಚಿಸುವ ಮೂಲಕ ಯುವಕರಿಗೆ ಉದ್ಯೋಗ ನೀಡಲು ಉದ್ದೇಶಿಸಿದ್ದು, ಕ್ಷೇತ್ರದ ಅಭಿವೃದ್ಧಿಗಾಗಿ ಇಲ್ಲಿಯವರೆಗೆ ಸರಕಾರದಿಂದ 8 ನೂರು ಕೋಟಿ ರೂ.ಗಳ ಅನುದಾನ ಒದಗಿ ಬಂದಿದ್ದು, ಮಾದರಿ ಕ್ಷೇತ್ರ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಎನ್ .ಎಚ್ .ಕೋನರಡ್ಡಿ ಹೇಳಿದರು.

ಶನಿವಾರ ಪಟ್ಟಣದ ಮಾಡೆಲ್ ಹೈಸ್ಕೂಲ್ ಮೈದಾನದಲ್ಲಿತಾಲೂಕಾಡಳಿತದಿಂದ ಆಯೋಜಿಸಿದ್ದ 80ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್ಲಿಮಾತನಾಡಿದರು.

ವಿಧಾನಸಭಾ ಕ್ಷೇತ್ರದಲ್ಲಿಬಡವರಿಗೆ ಸೂರು ಒದಗಿಸುವ ಉದ್ದೇಶದಿಂದ ನಿವೇಶನ ಹಂಚಿಕೆ ಮಾಡಲಾಗಿದ್ದು, ನೂರಾರು ಚಕ್ಕಡಿ ರಸ್ತೆಗಳನ್ನು ನಿರ್ಮಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ, ತಾಲೂಕಿನಲ್ಲಿ7 ಕೆಪಿಎಸ್ ಇ ಶಾಲೆಗಳನ್ನು ಆರಂಭಿಸಲಾಗಿದೆ. ಈ ಭಾಗದ ರೈತರ ಬಹುದಿನಗಳ ಕನಸಾದ ಮಹದಾಯಿ ಯೋಜನೆ ಜಾರಿಗೆ ರಾಜ್ಯ ಸರಕಾರ ಈಗಾಗಲೇ ಟೆಂಡರ್ ಕರೆದು ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿದ್ದು, ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿ ಪಡೆಯಲು ನಿರಂತರ ಕೇಂದ್ರದ ಮೇಲೆ ಒತ್ತಡ ಹೇರಲಾಗುತ್ತಿದೆ. ಮುಂಗಾರು ಹಂಗಾಮಿನಲ್ಲಿಮಳೆ ಕೊರತೆಯಿಂದಾಗಿ ರೈತರು ಸಂಕಷ್ಟದಲ್ಲಿದ್ದು ಸರಕಾರದಿಂದ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದರು.

ತಹಸೀಲ್ದಾರ್ ಸುಧೀರ ಸಾಹುಕಾರ ಧ್ವಜಾರೋಹಣ ನೆರವೇರಿಸಿದರು. ಸಿಪಿಐ ರವಿಕುಮಾರ ಕಪ್ಪತ್ತನವರ, ಎಸ್ ಐ ಜನಾರ್ಧನ ಭಟ್ರಹಳ್ಳಿ, ತಾಪಂ ಇಒ ರವೀಂದ್ರ ಪಾಟೀಲ್ , ಪುರಸಭೆ ಸಿಒ ಶರಣಪ್ಪ ಪೂಜಾರ, ಬಿಇಒ ಅರ್ಜುನ ಕಂಬೋಗಿ, ಸಂಗಪ್ಪ ಲಂಗೋಟಿ, ಜೀವನ ಪವಾರ, ಆನಂದ ಹವಳಕೋಡ್ , ಮದರಸಾಬ ಉಗರಗೋಳ, ಶಿರಾಜ ಧಾರವಾರ, ಕುಮಾರ ಕಲಾಲ, ಪ್ರೇಮಾ ನಾಯ್ಕರ, ಮೋದಿನಸಾಬ ಶಿರೂರ ಮತ್ತಿತರರಿದ್ದರು.

ಇದೇ ಸಂದರ್ಭದಲ್ಲಿತಾಲೂಕಿನ 50ಕ್ಕೂ ಹೆಚ್ಚು ಮಾಜಿ ಪೈಲವಾನರನ್ನು ಹಾಗೂ ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿಪ್ರಥಮ ಸ್ಥಾನ ಪಡೆದ ಶಿಕ್ಷಕಿ ಸರಸ್ವತಿ ಸುಣಗಾರ ಅವರನ್ನು ಸತ್ಕರಿಸಲಾಯಿತು.

ಪೊಟೊ-15-ಎನ್ ವಿಎಲ್ -1

ನವಲಗುಂದ ಮಾಡೆಲ್ ಹೈಸ್ಕೂಲ್ ಆವರಣದಲ್ಲಿತಾಲೂಕಾ ಆಡಳಿತದಿಂದ ನಡೆದ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿಶಾಸಕ ಎನ್ .ಎಚ್ .ಕೋನರಡ್ಡಿ ಧ್ವಜವಂದನೆ ಸ್ವೀಕರಿಸಿ ಮಾತನಾಡಿದರು. ತಹಸೀಲ್ದಾರ್ ಸುಧೀರ ಸಾಹುಕಾರ ಮತ್ತಿತರರಿದ್ದರು.