ಡಾ.ಬಿ.ಆರ್ .ಅಂಬೇಡ್ಕರ್ ಪ್ರತಿಮೆ ಅನಾವರಣಕ್ಕೆ ಒತ್ತಾಯ

Contributed bynagesh_crp9@yahoo.com|Vijaya Karnataka
demand for the unveiling of dr br ambedkars statue satyagraha procession on the 25th
25ಕ್ಕೆ ಪಟ್ಟಣದಲ್ಲಿಅರೆಬೆತ್ತಲೆ ಚಳವಳಿ

ವಿಕ ಸುದ್ದಿಲೋಕ ಚನ್ನರಾಯಪಟ್ಟಣ
ಸಂವಿಧಾನಶಿಲ್ಪಿ ಡಾ.ಬಿ.ಆರ್ .ಅಂಬೇಡ್ಕರ್ ಅವರ ಪ್ರತಿಮೆಯನ್ನು ಪಟ್ಟಣದ ಮಿನಿವಿಧಾನಸೌಧದ ಎದುರು ನಿಲ್ಲಿಸಿ 10 ತಿಂಗಳಾದರೂ ಅನಾವರಣ ಮಾಡಲು ತಾಲೂಕು ಆಡಳಿತ ಮೀನಮೇಷ ಎಣಿಸುತ್ತಿರುವುದನ್ನು ಖಂಡಿಸಿ ಆ.25ರಂದು ಅರೆಬೆತ್ತಲೆ ಚಳವಳಿ ಹಮ್ಮಿಕೊಳ್ಳುವುದಾಗಿ ಬಿಜೆಪಿ ಮುಖಂಡ ನಂಜುಂಡಮೈಮ್ ತಿಳಿಸಿದರು.

ಈ ಸಂಬಂಧ ಭಿತ್ತಿಪತ್ರ ಬಿಡುಗಡೆ ಮಾಡಿ ಮಾತನಾಡಿ,‘‘ಪ್ರತಿಮೆ ಲೋಕಾರ್ಪಣೆ ಮಾಡಬೇಕೆಂದು 15 ದಿನದ ಹಿಂದೆಯೇ ಮೌನ ಪ್ರತಿಭಟನೆ ಮಾಡಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರೂ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ಬೇಸರದ ಸಂಗತಿಯಾಗಿದೆ,’’ಎಂದರು.

‘‘ಪ್ರತಿಮೆ ಅನಾವರಣಕ್ಕೆ ಇಲ್ಲಸಲ್ಲದ ಕಾರಣಗಳನ್ನು ಮುಂದಿಟ್ಟುಕೊಂಡು ಮುಂದೂಡುತ್ತಿರುವುದು ಏಕೆಂದು ಅರ್ಥವಾಗುತ್ತಿಲ್ಲ. ಅವರಿಗೆ ಆಗದಿದ್ದರೆ ನಮಗೆ ಜವಾಬ್ದಾರಿ ನೀಡಿದರೆ ಎಲ್ಲವ್ಯವಸ್ಥೆಯನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿ ಪ್ರತಿಮೆ ಅನಾವರಣ ಮಾಡುತ್ತೇವೆ. ಮತ್ತೆ ಮುಂದೂಡುವ ಪ್ರಯತ್ನ ಮುಂದುವರಿಸಿದರೆ ಆ.25ರಂದು ವಿವಿಧ ಸಂಘಟನೆಗಳೊಂದಿಗೆ ಸೇರಿ ಅರೆಬೆತ್ತಲೆ ಮೆರವಣಿಗೆ ಮಾಡಲಾಗುವುದು,’’ಎಂದು ಎಚ್ಚರಿಸಿದರು.

‘‘ಪಟ್ಟಣದ ಕೆ.ಆರ್ .ವೃತ್ತದಿಂದ ಅಂಬೇಡ್ಕರ್ ಪ್ರತಿಮೆವರೆಗೆ ಮೆರವಣಿಗೆ ನಡೆಸಲಾಗುವುದು. ಪ್ರತಿಮೆ ಅನಾವರಣವಾಗುವ ತನಕವೂ ಪ್ರತಿಭಟನೆ ಮುಂದುವರಿಯಲಿದೆ,’’ಎಂದು ಹೇಳಿದರು.

ಬಿಜೆಪಿ ಮುಖಂಡರಾದ ಪರಮ ಗಂಗಾಧರ್ , ಪ್ರಶಾಂತ್ , ಗನ್ನಿವಿಶ್ವನಾಥ್ , ಮಣಿಕಂಠ, ಸಿ.ಜಿ.ಕುಮಾರ್ ಮತ್ತಿತರರು ಹಾಜರಿದ್ದರು.

ಚಿತ್ರ: ಎಚ್ ಎಸ್ ಎನ್ 23ಸಿಆರ್ ಪಿ2- ಚನ್ನರಾಯಪಟ್ಟಣ ಮಿನಿವಿಧಾನಸೌಧದ ಆವರಣದಲ್ಲಿನಿಲ್ಲಿಸಿರುವ ಡಾ.ಬಿ.ಆರ್ .ಅಂಬೇಡ್ಕರ್ ಪ್ರತಿಮೆ ಅನಾವರಣ ವಿಬಂಳ ಖಂಡಿಸಿ ನಡೆಯುವ ಪ್ರತಿಭಟನೆ ಹಿನ್ನೆಲೆ ಬಿಜೆಪಿ ಮುಖಂಡ ನಂಜುಂಡ ಮೈಮ್ ಭಿತ್ತಿಪತ್ರ ಬಿಡುಗಡೆ ಮಾಡಿದರು.