ಮಳವಳ್ಳಿ: ತಾಲೂಕಿನ ಹಲಗೂರಿನ ಚನ್ನಪಟ್ಟಣ ರಸ್ತೆಯ ಜೆಪಿಎಂ ಬಡಾವಣೆ ನಿವಾಸಿ ಸುರೇಶ್ ಜಿ.ಕೆ ಅವರ ಪತ್ನಿ ನಾಗಮಣಿ ಕೆ. ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯದ ಪಿಎಚ್ ಡಿ ಪದವಿ ದೊರೆತಿದೆ. ಬೆಂಗಳೂರು ವಿವಿ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾದ ಪ್ರೊ.ಬಿ.ಗಂಗಾಧರ್ ಅವರ ಮಾರ್ಗದರ್ಶನದಲ್ಲಿನಾಗಮಣಿ ಕೆ. ಅವರು ಸಿದ್ಧಪಡಿಸಿದ ಪ್ರಗತಿಶೀಲ ಸಾಮಾಜಿಕ ಕಾದಂಬರಿಗಳಲ್ಲಿಸ್ತ್ರೀ ಸಂವೇದನೆ ಸಂಶೋಧನಾ ಪ್ರಬಂಧಕ್ಕೆ ಪಿಎಚ್ ಡಿ ಪದವಿ ನೀಡಿ ಗೌರವಿಸಿದೆ. ನಾಗಮಣಿ ಕೆ.ಅವರು ಪ್ರಸ್ತುತ ಮಳವಳ್ಳಿ ತಾಲೂಕಿನ ಪೂರಿಗಾಲಿ ಪಿ.ಎಲ್ .ಎನ್ . ಪ್ರಥಮ ದರ್ಜೆ ಕಾಲೇಜಿನಲ್ಲಿಕನ್ನಡ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
23ಒಐಗಿ1 ನಾಗಮಣಿ ಕೆ. ಚಿತ್ರ

