ಕುಂದಾಪುರ: ಇಲ್ಲಿನ ಡಾ.ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಯಡಾಡಿ-ಮತ್ಯಾಡಿಯಲ್ಲಿಆಯೋಜಿಸಿರುವ ವಾರ್ಷಿಕ ವಿಶೇಷ ಶಿಬಿರದ ಭಾಗವಾಗಿ ಹುಣ್ಸೆಮಕ್ಕಿ ಹೆಗ್ಡೆ ಹೌಸ್ ವಠಾರದಲ್ಲಿಕೆಸರಿನಲ್ಲೊಂದು ದಿನ ಕಾರ್ಯಕ್ರಮ ಜರುಗಿತು.
ಉದ್ಯಮಿ ವಸಂತಿ ಎಂ. ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಉದ್ಯಮಿ ಸಬ್ಲಾಡಿ ಮಂಜಯ್ಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಿನ್ಸಿಪಾಲ್ ಡಾ. ಕೆ. ಉಮೇಶ್ ಶೆಟ್ಟಿ ಆಶಯನುಡಿಗಳನ್ನಾಡಿದರು. ಪ್ರಥಮ ದರ್ಜೆ ಗುತ್ತಿಗೆದಾರ ಬಿ. ಅರುಣ್ ಕುಮಾರ್ ಹೆಗ್ಡೆ, ಕಾಲೇಜು ಆಡಳಿತ ಮಂಡಳಿ ಸದಸ್ಯ ಎನ್ . ನಾರಾಯಣ್ ನಾಯಕ್ , ಉದ್ಯಮಿ ಕಿಶೋರ್ ಕುಮಾರ್ ಶೆಟ್ಟಿ ಕ್ಯಾಸನಮಕ್ಕಿ, ಸ್ಥಳೀಯ ಶಾಲಾ ಮುಖ್ಯ ಶಿಕ್ಷಕ ಸಂತೋಷ್ ಶೆಟ್ಟಿ, ಜಯರಾಮ ಶೆಟ್ಟಿ ಕೈಲ್ಕೆರೆ, ಬನ್ನಾಡಿ ಬ್ರಹ್ಮಬೈದರ್ಕಳ ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಬನ್ನಾಡಿ, ಹುಣ್ಸೆಮಕ್ಕಿ ಬ್ರಹ್ಮಲಿಂಗೇಶ್ವರ ದೇವಸ್ಥಾನ ತಲ್ಮಕ್ಕಿಯ ಆನುವಂಶಿಕ ಮೊಕ್ತೇಸರ ವಿಶ್ವಾಸ್ ಭಂಡಾರ್ಕಾರ್ , ಗುತ್ತಿಗೆದಾರ ವಿಜಯಚಂದ್ರ ಶೆಟ್ಟಿ ಕೊತ್ತಾಡಿ, ಹುಣ್ಸೆಮಕ್ಕಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ್ ಪೂಜಾರಿ, ಯಡಾಡಿ-ಮತ್ಯಾಡಿಯ ಶಿಕ್ಷಕರಾದ ಸುಧಾಕರ್ ಹಳ್ನಿರು, ಮಂಜುನಾಥ್ ಪೂಜಾರಿ ಹುಣ್ಸೆಮಕ್ಕಿ, ಹೊಂಬಾಡಿ- ಮಂಡಾಡಿಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಣೇಶ್ ಶೆಟ್ಟಿ, ಯಕ್ಷಕೇದಿಗೆ ಮಹಾಲಿಂಗೇಶ್ವರ ಯಕ್ಷಗಾನ ಸಂಘ ಗುಡ್ಡೆಯಂಗಡಿ ಅಧ್ಯಕ್ಷ ರಾಜಾರಾಮ್ ಶೆಟ್ಟಿ, ಸಂಕೇತ್ ಕೊಠಾರಿ ಗುಡ್ಡೆಯಂಗಡಿ, ಹರೀಶ್ ಆಚಾರ್ ಗುಡ್ಡೆಯಂಗಡಿ, ಪ್ರಭಾಕರ್ ಆಚಾರ್ ಗುಡ್ಡೆಯಂಗಡಿ, ರಂಜಿತ್ ಶೆಟ್ಟಿ ಮತ್ಯಾಡಿ, ಸುರೇಶ್ ಶೆಟ್ಟಿ ಮತ್ಯಾಡಿ, ರಾಘವೇಂದ್ರ ಕುಲಾಲ್ ನಾಲ್ತೂರು, ಶಿವರಾಮ್ ಅಡಿಗ ನಾಲ್ತೂರು ಉಪಸ್ಥಿತರಿದ್ದರು. ಶಿಬಿರಾಧಿಕಾರಿ ಪೂಜಾ ಕುಂದರ್ ಕಾರ್ಯಕ್ರಮ ನಿರ್ವಹಿಸಿದರು.
ಪೋಟೊ//24ಕೆ-ಎಚ್ ಯುಎನ್ //. ಮಹಿಳಾ ಉದ್ಯಮಿ ವಸಂತಿ ಎಂ.ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು

