26ಕ್ಕೆ ಕಬ್ಬು ನುರಿಸುವ ಕಾರ್ಯ ಸ್ಥಗಿತ
ಇಂಡಿ: ತಾಲೂಕಿನ ಮರಗೂರ ಗ್ರಾಮದ ಭೀಮಾಶಂಕರ ಸಹಕಾರ ಸಕ್ಕರೆ ಕಾರ್ಖಾನೆಯ 2025-26 ನೇ ಸಾಲಿನ ಕಬ್ಬು ನುರಿಸುವ ಕಾರ್ಯವನ್ನು ಫೆ.26 ರಂದು ಮುಕ್ತಾಯಗೊಳಿಸಲಾಗುವುದು ಎಂದು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿತಿಳಿಸಿದ್ದಾರೆ.
ಕಬ್ಬು ಬೆಳೆಗಾರರು ಕಾರ್ಖಾನೆಯೊಂದಿಗೆ ಕಬ್ಬು ಪೂರೈಕೆಯ ಕರಾರಿಗೆ ಒಳಪಟ್ಟ ಆದೇಶದಂತೆ ತಮ್ಮ ಎಲ್ಲಕಬ್ಬನ್ನು ಫೆ.26 ರವರೆಗೆ ಕಾರ್ಖಾನೆಗೆ ಪೂರೈಸಿ ಸಹಕರಿಸಬೇಕು. ಫೆ.26 ರ ನಂತರ ಕರಾರು ಪತ್ರ ರದ್ದುಗೊಳ್ಳುತ್ತದೆ. ನಂತರ ಕಟಾವುಗೊಳ್ಳದೆ ಉಳಿಯುವ ಕಬ್ಬಿಗೆ ಕಾರ್ಖಾನೆಯು ಜವಾಬ್ದಾರಿ ಆಗಿರುವುದಿಲ್ಲಎಂದು ತಿಳಿಸಿದ್ದಾರೆ.

