53ನೇ ಮಾಸಿಕ ಶಿವಾನುಭವ
ವಿಕ ಸುದಿಲೋಕ ಗದಗ
ಕುರುಹಿನಶೆಟ್ಟಿ ಸಮಾಜ ಬೆಟಗೇರಿ-ಗದಗ ವರಿಷ್ಠ ಮಂಡಳಿ ಹಾಗೂ ನೇಕಾರ ಅಭಿವೃದ್ಧಿ ಸಂಘದ ಆಶ್ರಯದಲ್ಲಿ53ನೇ ಮಾಸಿಕ ಶಿವಾನುಭವ ಕಾರ್ಯಕ್ರಮ ಮಾ.2ರಂದು ಸಂಜೆ 6.30ಕ್ಕೆ ಕುರಹಟ್ಟಿಪೇಟೆಯ ಶ್ರೀ ನೀಲಕಂಠೇಶ್ವರ ಮಠದಲ್ಲಿನಡೆಯಲಿದೆ.
ಸಾನ್ನಿಧ್ಯವನ್ನು ಶ್ರೀಶೈಲ ಮೂಲಪೀಠದ ಜಗದ್ಗುರು ಶ್ರೀನಾಲ್ವಡಿ ನೀಲಕಂಠ ಪಟ್ಟದಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ. ನರಸಿಂಹ ಕಾಮೂರ್ತಿ ಅಧ್ಯಕ್ಷತೆ ವಹಿಸಲಿದ್ದು, ಬೂದಪ್ಪ ಮಾನೇದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತೆ ಕುರಿತು ಉಪನ್ಯಾಸ ನೀಡಲಿದ್ದಾರೆ.
ಶಿವರಾಮ ವನ್ನಾಲ ದಾಸೋಹ ಸೇವೆ ವಹಿಸಿಕೊಳ್ಳಲಿದ್ದಾರೆ.

