ವಿಕ ಸುದ್ದಿಲೋಕ ಮಾಲೂರು
ಮಾರಿಕಾಂಬ ದೇವಾಲಯದಲ್ಲಿಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಕಾಲಕಾಲಕ್ಕೆ ನಡೆಸಿಕೊಂಡು ಹೋಗುವ ಮೂಲಕ ಹಲವು ಸಾಮಾಜಿಕ ಕಾರ್ಯಕ್ರಮಗಳ ಜತೆಗೆ ಶಿಕ್ಷಣ ಕ್ಷೇತ್ರದಲ್ಲಿಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಕಾರ ಹಾಗೂ ಯುಪಿಎಸ್ಸಿ ತರಬೇತಿ ಪಡೆಯುತ್ತಿರುವ ಇಬ್ಬರು ವಿದ್ಯಾರ್ಥಿಯನ್ನು ದತ್ತು ಪಡೆದು ಅವರಿಗೆ ಆರ್ಥಿಕ ಸಹಕಾರ ನೀಡಲಾಗುವುದು ಎಂದು ಮಾರಿಕಾಂಬಾ ದೇವಾಲಯ ಟ್ರಸ್ಟಿನ ಅಧ್ಯಕ್ಷ ಪಿ.ವೆಂಕಟೇಶ್ ಹೇಳಿದರು.
ನಗರದ ಮಾರಿಕಾಂಬಾ ದೇವಾಲಯದ ಅನ್ನ ಛತ್ರ ಸಭಾಂಗಣದಲ್ಲಿನಡೆದ ದೇವಾಲಯದ ಟ್ರಸ್ಟ್ ಹಾಗೂ ಭಕ್ತರ ಸಮ್ಮುಖದಲ್ಲಿನಡೆದ ಸಭೆಯಲ್ಲಿಮಾತನಾಡಿದರು. ಶ್ರೀಕ್ಷೇತ್ರ ಮಾರಿಕಾಂಬ ದೇವಾಲಯಕ್ಕೆ ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತರ ಹುಂಡಿಗೆ ಕಾಣಿಕೆ ಅಥವಾ ಮುಡಿಪು ರೂಪದಲ್ಲಿಸಲ್ಲಿಸುವ ಹುಂಡಿ ಹಣದಿಂದ ಟ್ರಸ್ಟ್ ಎಲ್ಲಾನಿರ್ದೇಶಕರ ಸಹಕಾರ ಪಡೆದು ಪ್ರತಿ ವರ್ಷ ದೇವಾಲಯದಿಂದ ನಡೆಯುವ ಕಳಶ ಮಹೋತ್ಸವ ಇನ್ನಿತರೆ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಸರಕಾರಿ ಶಾಲೆಗಳಲ್ಲಿಹಾಗೂ ಪದವಿ ಹಾಗೂ ಉನ್ನತ ಶಿಕ್ಷಣ ಪಡೆಯುವ ಬಡ ವಿದ್ಯಾರ್ಥಿಗಳ ಶಿಕ್ಷಣವನ್ನು ಪ್ರೋತ್ಸಾಹಿಸುವ ಸಲುವಾಗಿ ಅಂತಹವರನ್ನು ಗುರುತಿಸಿ ಆರ್ಥಿಕ ಸಹಕಾರ ನೀಡಲಾಗಿದೆ ಎಂದರು.
ಪ್ರಸ್ತುತ ಇಬ್ಬರು ಹೆಣ್ಣು ಮಕ್ಕಳು ಪದವಿಯನ್ನು ಪಡೆದು ಬೆಂಗಳೂರಿನಲ್ಲಿಯುಪಿಎಸ್ಸಿ ತರಬೇತಿ ಪಡೆಯುತ್ತಿದ್ದು ಅವರು ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲದ ಕಾರಣ ಅವರ ಪೋಷಕರು ತಮ್ಮ ಮಕ್ಕಳಿಗೆ ಯುಪಿಎಸ್ಸಿ ತರಬೇತಿ ಪಡೆಯಲು ಆರ್ಥಿಕ ಸಹಕಾರ ನೀಡುವಂತೆ ಮನವಿ ಮಾಡಿದ್ದರು. ಅದರಂತೆ ತಾಲೂಕಿನ ಗಂಗಾಪುರ ಗ್ರಾಮದ ಸುಶ್ಮಿತಾ ಹಾಗೂ ನಗರದ ಕರ್ಮಚಾರಿ ಬೀದಿಯಲ್ಲಿರುವ ಕನಕ ಅವರನ್ನು ಮಾರಿಕಾಂಬ ದೇವಾಲಯ ಟ್ರಸ್ಟ್ ವತಿಯಿಂದ ದತ್ತು ಪಡೆದು ಅವರ ಯುಪಿಎಸ್ ಶಿಕ್ಷಣಕ್ಕೆ ಅಗತ್ಯವಿರುವ ವೆಚ್ಚ ಭರಿಸಲಾಗುವುದು. ಬಡವರ್ಗದ ಪ್ರತಿಭಾವಂತ ಹೆಣ್ಣು ಮಕ್ಕಳು ಮುಂದೆ ಬಂದು ಯುಪಿಎಸ್ಸಿ ತರಬೇತಿ ಪಡೆಯಲು ಆರ್ಥಿಕ ಸಹಕಾರ ಮನವಿ ಮಾಡಿದ್ದಲ್ಲಿಟ್ರಸ್ಟ್ ವತಿಯಿಂದ ಅಂತಹ ಹೆಣ್ಣು ಮಕ್ಕಳಿಗೆ ಆರ್ಥಿಕ ಸಹಕಾರ ನೀಡಲಾಗುವುದು ಎಂದರು.
ಕಾರಣಾಂತರಗಳಿಂದ ಕಳೆದ ವರ್ಷ ಡಿಸೆಂಬರ್ ನಲ್ಲಿನಡೆಯಬೇಕಾಗಿದ್ದ ಕಳಶ ಮಹೋತ್ಸವ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು, ಪ್ರಸಕ್ತ ವರ್ಷ ಡಿಸೆಂಬರ್ 9 ರಿಂದ 14ರವರೆಗೆ ಟ್ರಸ್ಟ್ ಹಾಗೂ ಭಕ್ತರ ಸಹಕಾರದಿಂದ ಹಂಬಿಕೊಳ್ಳಲಾಗುವುದು ಎಂದರು.
ಸಭೆಯಲ್ಲಿಟ್ರಸ್ಟಿನ ಖಜಾಂಚಿ ತಬಲ ನಾರಾಯಣಪ್ಪ, ಸದಸ್ಯರಾದ ಜಗನ್ನಾಥ್ , ಆರ್ .ಕೃಷ್ಣಪ್ಪ, ನವರಂಗ್ ಮಂಜುನಾಥ್ , ವೆಂಕಟೇಶ್ , ಮಂಜುನಾಥ್ , ಕಸಾಪ ಅಧ್ಯಕ್ಷ ಎಂ.ವಿ.ಹನುಮಂತಯ್ಯ, ಭಕ್ತರು ಹಾಜರಿದ್ದರು.
13 ಮಾಲೂರು ®ಪೋಟೊ 3. ಮಾಲೂರು ನಗರದ ಮಾರಿಕಾಂಬಾ ದೇವಾಲಯದ ಅನ್ನ ಛತ್ರ ಸಭಾಂಗಣದಲ್ಲಿನಡೆದ ದೇವಾಲಯದ ಟ್ರಸ್ಟ್ ಹಾಗೂ ಭಕ್ತರ ಸಮ್ಮುಖದಲ್ಲಿನಡೆದ ಸಭೆಯಲ್ಲಿಮಾರಿಕಾಂಬಾ ದೇವಾಲಯ ಟ್ರಸ್ಟಿನ ಅಧ್ಯಕ್ಷ ಪಿ.ವೆಂಕಟೇಶ್ ಭಾಗವಹಿಸಿ ಮಾತನಾಡಿದರು.

