ಬಂದಿನಿವಾಸಿಗಳಿಗೆ ಅಗರಬತ್ತಿ ತಯಾರಿಕೆ ತರಬೇತಿ

Contributed byravimgl.kumar13@gmail.com|Vijaya Karnataka
training in agarbatti production for prison inmates a new path to advancement
ಬಂದಿನಿವಾಸಿಗಳಿಗೆ ಅಗರಬತ್ತಿ ತಯಾರಿಕೆ ತರಬೇತಿ

ಚಿತ್ರದುರ್ಗ: ನಗರದ ಜಿಲ್ಲಾಕಾರಾಗೃಹದಲ್ಲಿರುಡ್ ಸೆಟ್ ಸಂಸ್ಥೆ ಹಾಗೂ ಜಿಪಂ ಎನ್ ಆರ್ ಎಲ್ ಎಂ ವಿಭಾಗದ ಸಹಯೋಗದಲ್ಲಿಕಾರಾಗೃಹದ ಬಂದಿನಿವಾಸಿಗಳಿಗೆ 12 ದಿನಗಳ ಕಾಲ ಆಯೋಜಿಸಿದ್ದ ಅಗರಬತ್ತಿ ತಯಾರಿಕೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿಜಿಪಂ ಯೋಜನಾ ನಿರ್ದೇಶಕಿ ಜಯಲಕ್ಷ್ಮೇ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.
ಈ ಸಂದರ್ಭದಲ್ಲಿಜಿಲ್ಲಾಕಾರಾಗೃಹ ಅಧೀಕ್ಷಕ ಸಿದ್ದರಾಮ ಬಿ. ಪಾಟೀಲ, ಜೈಲರ್ ಗಳಾದ ರಾಜೇಂದ್ರ ಕೊಪರ್ಡೆ, ಸಾವಿತ್ರಿ, ಸಹಾಯಕ ಜೈಲರ್ ಗಳಾದ ಎಸ್ .ಆರ್ .ಮನ್ನೇರಿ, ಮಡಿವಾಳಪ್ಪ, ಜಿಪಂ ಎನ್ ಆರ್ ಎಲ್ ಎಂ ವಿಭಾಗದ ಜಿಲ್ಲಾವ್ಯವಸ್ಥಾಪಕ ಯೋಗೇಶ್ವರಪ್ಪ, ರುಡ್ ಸೆಟ್ ಸಂಸ್ಥೆಯ ನಿರ್ದೇಶಕ ಎಚ್ .ಟಿ.ಬಸವರಾಜ ಅಶೋಕಪ್ಪ, ಸಂಸ್ಥೆಯ ಉಪನ್ಯಾಸಕ ತೋಟಪ್ಪ.ಎಸ್ ಗಾಣಿಗೇರ, ಶಿಕ್ಷಕ ವೀರೇಶ್ ಕುಮತಿ ಸೇರಿದಂತೆ 25 ಮಂದಿ ಶಿಬಿರಾರ್ಥಿಗಳು, ಸಂಸ್ಥೆಯ ಸಿಬ್ಬಂದಿ ಇದ್ದರು.

ಫೋಟೊ ಕ್ಯಾಪ್ಷನ್ /24ಸಿಟಿಡಿ34

ಚಿತ್ರದುರ್ಗದ ಜಿಲ್ಲಾಕಾರಾಗೃಹದಲ್ಲಿರುಡ್ ಸೆಟ್ ಸಂಸ್ಥೆ ಹಾಗೂ ಜಿಪಂ ಎನ್ ಆರ್ ಎಲ್ ಎಂ ವಿಭಾಗದ ಸಹಯೋಗದಲ್ಲಿಕಾರಾಗೃಹದ ಬಂದಿನಿವಾಸಿಗಳಿಗೆ ಆಯೋಜಿಸಿದ್ದ ಅಗರಬತ್ತಿ ತಯಾರಿಕೆ ತರಬೇತಿಯ ಸಮಾರೋಪ ಸಮಾರಂಭದಲ್ಲಿಅಧಿಕಾರಿಗಳು, ಸಿಬ್ಬಂದಿ, ಶಿಬಿರಾರ್ಥಿಗಳು ಭಾಗವಹಿಸಿದ್ದರು.

-----

26ಕ್ಕೆ ಮಾಸಿಕ ಗಮಕ ಸರಣಿ

ಚಿತ್ರದುರ್ಗ: ನಗರದ ಗಮಕ ಕಲಾಭಿಮಾನಿಗಳ ಸಂಘವು ತನ್ನ 40ನೇ ವಾರ್ಷಿಕೋತ್ಸವದ ನಿಮಿತ್ತ ನಡೆಸುತ್ತಿರುವ ಮಾಸಿಕ ಗಮಕ ಸಂಭ್ರಮದ 36ನೇ ಅಧಿವೇಶನವು ಜು.26ರ ಸಂಜೆ 6ಕ್ಕೆ ನಗರದ ಜೆಸಿಆರ್ ಬಡಾವಣೆಯ ಶ್ರೀಗಣಪತಿ ದೇವಾಲಯದಲ್ಲಿನಡೆಯಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

ಈ ಸಂದರ್ಭದಲ್ಲಿಗಮಕ ಗಾಯನವನ್ನು ಸಂಗೀತ ಶಿಕ್ಷಕಿ ಮೀನಾಕ್ಷಿ ಭಟ್ ನಡೆಸಿಕೊಡುವರು. ಸರಕಾರಿ ಕಲಾ ಕಾಲೇಜಿನ ಪ್ರಾಚಾರ್ಯೆ ಡಾ.ತಾರಿಣಿ ಶುಭದಾಯಿನಿ ಉಪನ್ಯಾಸ ನೀಡುವರು ಸಮಿತಿ ಪದಾಧಿಕಾರಿಗಳು ಪ್ರಕಟಣೆ ಮೂಲಕ ಕೋರಿದ್ದಾರೆ.