ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಬೈಂದೂರು ಗೋಳಿಹೊಳೆ ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿಜು. 29ರಿಂದ ಸೆ. 14ರವರೆಗೆ ಕನ್ಯಾಡಿ ರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಚಾತುರ್ಮಾಸ್ಯ ನಡೆಯಲಿದೆ. ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಉಡುಪಿ ಜಿಲ್ಲೆಯಲ್ಲಿಮೊದಲ ಬಾರಿಗೆ ಈ ಕೈಂಕರ್ಯ ಮಾಡುತ್ತಿದ್ದಾರೆ.
ಉಡುಪಿ ಕೀರ್ತಿಶೇಷ ಯತಿವರೇಣ್ಯ ಶ್ರೀ ವಿದ್ಯಾಮಾನ್ಯ ತೀರ್ಥ ಶ್ರೀಪಾದರು ಶ್ರೀಮಧ್ವರಿಗೆ ದೀಕ್ಷಾ ಪ್ರದಾನ ಮಾಡಿದ ಶ್ರೀ ಅಚ್ಯುತಪ್ರಜ್ಞರು ಹಾಗೂ ಶ್ರೀ ಸತ್ಯತೀರ್ಥರ ಪರಂಪರೆಯ ಪೀಠಾರೋಹಣ ಶತಮಾನೋತ್ಸವದ ಸಂಭ್ರಮ-2026 ಹಾಗೂ ಶ್ರೀವಿದ್ಯಾಮಾನ್ಯ ತೀರ್ಥ ಶ್ರೀಪಾದರ ಕರಕಮಲ ಸಂಜಾತರಾದ ಶ್ರೀವಿದ್ಯೇಶ ತೀರ್ಥರ 47ನೇ ಚಾತುರ್ಮಾಸ್ಯ ವ್ರತಾಚರಣೆಯು ಜು. 29ರಿಂದ ಸೆ.26 ರವರೆಗೆ ಬಾರ್ಕೂರು ಭಂಡಾರಕೇರಿ ಮಠದಲ್ಲಿನಡೆಯಲಿದೆ.
ವಿವಿಧ ಕಾರ್ಯಕ್ರಮಗಳು:
ಪ್ರತಿದಿನ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12.30 ರವರೆಗೆ ಹಾಗೂ ಮಧ್ಯಾಹ್ನ 3 ಗಂಟೆಯಿಂದ ನಿಗದಿತ ಭಾಗವನ್ನು ಮುಗಿಸುವ ತನಕ 48 ಮಂದಿ ವಿದ್ವಾಂಸರಿಂದ ನಾಲ್ಕು ವೇದಗಳ ಪಾರಾಯಣ ನಡೆಯಲಿದೆ. 36 ವಿದ್ವಾಂಸರಿಂದ ಮಧ್ವಭಾರತದ 108 ಬಾರಿ ಪಾರಾಯಣ, 16 ವಿದ್ವಾಂಸರಿಂದ ಸಮಗ್ರ ಶ್ರೀಮದ್ಭಾಗವತ ಪಾರಾಯಣ ನಡೆಯಲಿದೆ. ಸಂಜೆ 4 ಗಂಟೆಯಿಂದ 5 ಗಂಟೆವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಸಂಜೆ 5 ರಿಂದ 6.30 ರವರೆಗೆ ವಿದ್ವಾಂಸರಿಂದ ಭಾರತ-ರಾಮಾಯಣಾದಿಗಳ ಉಪಾಖ್ಯಾನಗಳ ಬಗ್ಗೆ ಪ್ರವಚನ ಆ ಬಳಿಕ ಶ್ರೀಪಾದರಿಂದ ಅನುಗ್ರಹ ಸಂದೇಶ.
ಸೆ. 12ರಿಂದ ಸೆ. 26 ರವರೆಗೆ 15 ವಿದ್ವಾಂಸರಿಂದ ಪ್ರೋಷ್ಠಪದಿ ಭಾಗವತ ಪ್ರವಚನ ನಡೆಯಲಿದೆ. ಪ್ರತಿದಿನ ಸಂಜೆ 6.30ರಿಂದ ರಾತ್ರಿ 8 ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮ, ಹರಿಕಥಾ ಕಾಲಕ್ಷೇಪ, ಯಕ್ಷಗಾನ, ತಾಳಮದ್ದಳೆ, ದಾಸವಾಣಿ, ಶಾಸ್ತ್ರೀಯ ಸಂಗೀತ, ಗಮಕ ವಾಚನ-ವ್ಯಾಖ್ಯಾನ, ಭರತನಾಟ್ಯ, ವೀಣಾವಾದನ, ವಿದ್ಯೇಶ ವಿಠಲಾಂಕಿತ ಕೃತಿಗಳ ಸಾಮೂಹಿಕ ಗಾಯನ ಇರಲಿದೆ.
100 ಜನ ವಿದ್ವಾಂಸರಿಗೆ ಮಧ್ವಾರಾದ್ಧಾಂತ ಸಂವರ್ಧಕ ಸಭೆಯ ವತಿಯಿಂದ ಸನ್ಮಾನ, ಸೆ. 5ರಂದು ಮಧ್ಯಾಹ್ನ 3ಗಂಟೆಗೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದಿಂದ ಭರಿತವಾದ ವಿಟ್ಲಪಿಂಡಿ ಶ್ರೀಕೃಷ್ಣ ಜಯಂತಿ ಮಹೋತ್ಸವ ನಡೆಯಲಿದೆ.