ಪಟ್ಟಣದ ರೋಟರಿ ಸಂಸ್ಥೆಯ ನರ್ಸರಿ ಶಾಲೆಯ ಆವರಣದಲ್ಲಿಕಾರ್ಗಿಲ್ ವಿಜಯೋತ್ಸವವನ್ನು ಆಚರಣೆ ಮಾಡಲಾಯಿತು.ಶಾಲೆಯ ಆವರಣದಲ್ಲಿನಡೆದ ಕಾರ ್ಯಕ್ರಮದಲ್ಲಿ ಶಾಲೆಯ ಮಕ್ಕಳು ಸೈನಿಕರ ಸಮವಸ್ತ್ರ ಧರಿಸಿ ಭಾರತ ಮಾತಾಕಿ ಜೈ ಎಂಬ ಘೋಷಣೆ ಕೂಗಿ ಗಮನಸೆಳೆದರು.
ಶಾಲೆಯ ಪ್ರಾಂಶುಪಾಲ ಸುಮಂತ್ ಭಾರ್ಗವ್ ಮಾತನಾಡಿ,‘‘1999 ರ ಕಾರ್ಗಿಲ್ ಯುದ್ಧದಲ್ಲಿಭಾರತೀಯ ಸೈನಿಕರ ಶೌರ್ಯ ಮತ್ತು ತ್ಯಾಗವನ್ನು ಗೌರವಿಸಲಾಗುತ್ತದೆ. ಈ ನಿಟ್ಟಿನಲ್ಲಿರೋಟರಿ ನರ್ಸರಿ ಶಾಲೆಯಲ್ಲಿಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮವನ್ನು ಪ್ರತಿ ವರ್ಷ ಮಕ್ಕಳಿಗೆ ಪರಿಚಯಿಸುವ ದೃಷ್ಟಿಯಿಂದ ಆಯೋಜಿಸುತ್ತಾ ಬರಲಾಗಿದೆ,’’ಎಂದರು.
ಕಾರ ್ಯಕ್ರಮದಲ್ಲಿರೋಟರಿ ಕ್ಲಬ್ ಅಧ್ಯಕ್ಷ ರವಿಕುಮಾರ್ , ನರ್ಸರಿ ಶಾಲೆಯ ಮುಖ್ಯ ಶಿಕ್ಷಕಿ ಪೂಜಾ, ಸಹ ಶಿಕ್ಷಕರು ಹಾಜರಿದ್ದರು.
ಫೋಟೋ(ಊಓ28ಏ1)-ಸಕಲೇಶಪುರದ ರೋಟರಿ ನರ್ಸರಿ ಶಾಲೆಯಲ್ಲಿಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ನಡೆದ ಕಾರ ್ಯಕ್ರಮದಲ್ಲಿಶಾಲಾ ಮಕ್ಕಳು ಯೋಧರ ಸಮವಸ್ತ್ರ ಧರಿಸಿ ಗಮನ ಸೆಳೆದರು.