ವಿಕ ಸುದ್ದಿಲೋಕ ಕುರುಗೋಡುಇತ್ತೀಚೆಗೆ ಗಂಗಾವತಿಯಲ್ಲಿಡ್ರೀಮ್ ವರ್ಡ್ ಮಾರ್ಷಲ್ ಆರ್ಟ್ ಸಂಸ್ಥೆಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಓಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿದ್ವಿತೀಯ ಸ್ಥಾನ ಪಡೆದ ಪಟ್ಟಣದ ನಂದಿ ಕರಾಟೆ ಸೆಂಟರ್ ನ ವಿದ್ಯಾರ್ಥಿ ಶಶಾಂಕಗೆ ನಂದಿ ಕರಾಟೆ ಸಂಸ್ಥೆಯಿಂದ ಸನ್ಮಾನಿಸಲಾಯಿತು.
ನಂದಿ ಕರಾಟೆ ಸೆಂಟರ್ ನ ಮಾಸ್ಟರ್ ವಿ.ಸತೀಶ್ ಮಾತನಾಡಿ, ‘‘ಸ್ಫರ್ಧೆಯಲ್ಲಿಸೋಲು-ಗೆಲುವು ಮುಖ್ಯವಲ್ಲ. ಸ್ಪರ್ಧೆಗಳಲ್ಲಿಮಕ್ಕಳು ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಪಠ್ಯೆದ ಜತೆ ಪಠ್ಯೇತರ ಚಟುವಟಿಕೆಯಲ್ಲಿಭಾಗವಹಿಸುವುದರಿಂದ ಮಕ್ಕಳು ಸಮಗ್ರವಾಗಿ ಅಭಿವೃದ್ಧಿ ಹೊಂದುತ್ತಾರೆ,’’ ಎಂದರು.
ನಂದಿ ಕರಾಟೆ ಸೆಂಟರ್ ನ ಮಾಸ್ಟರ್ ಜಿ.ಸುರೇಶ್ , ಡ್ರೀಮ್ ವರ್ಡ್ ಮಾರ್ಷಲ್ ಆರ್ಟ್ ಸಂಸ್ಥೆಯ ಮಾಸ್ಟರ್ ಶಿಹಾನ್ ಜಬಿವುಲ್ಲಾಸೇರಿ ಮತ್ತಿತರರು ಇದ್ದರು.
ಫೋಟೋ ಕ್ಯಾಪ್ಷನ್ : 27ಕೆಜಿಡಿ02
ಕುರುಗೋಡು ಪಟ್ಟಣದ ನಂದಿ ಕರಾಟೆ ಸೆಂಟರ್ ವಿದ್ಯಾರ್ಥಿ ಶಶಾಂಕ್ ಕರಾಟೆ ಸ್ಫರ್ಧೆಯಲ್ಲಿದ್ವಿತೀಯ ಸ್ಥಾನ ಪಡೆದ ಹಿನ್ನೆಲೆಯಲ್ಲಿಸನ್ಮಾನಿಸಲಾಯಿತು.