ವಿಕ ಸುದ್ದಿಲೋಕ ಕುಕನೂರು‘‘ಯುವಕರು ಕ್ರೀಡೆಯಲ್ಲಿಭಾಗವಹಿಸವ ಮೂಲಕ ದೈಹಿಕ ಮತ್ತು ಮಾನಸಿಕವಾಗಿ ಗಟ್ಟಿಗೊಳ್ಳಬೇಕು,’’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ್ ಹೇಳಿದರು.
ಪಟ್ಟಣದ ವಿದ್ಯಾನಂದ ಗುರುಕುಲ ಕಾಲೇಜು ಆವರಣದಲ್ಲಿಭಾನುವಾರ ನಡೆದ ಕ್ರಿಕೆಟ್ ಆಟಗಾರ ದಿ. ಮುತ್ತು ತಳಕಲ್ ಅವರ ಸ್ಮರಣಾರ್ಥ ನಡೆದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮತನಾಡಿದರು.
ಕುಕನೂರು ಅಭಿವೃದ್ಧಿ ಸಮಿತಿ ಸಹ ಸಂಚಾಲಕ ಮಂಜುನಾಥ ನಾಡಗೌಡ ಮಾತನಾಡಿ, ಈ ಭಾಗದಲ್ಲಿಉದ್ಯಮಿ, ವ್ಯಾಪಾರ, ಪ್ರವಾಸೋಧ್ಯಮದಂತಹ ಇಲ್ಲಿನ ಜನರು ಬದುಕು ಕಟ್ಟಿಕೊಳ್ಳುತ್ತಾರೆ ಎಂದರು.
ಕ್ರಿಕೆಟ್ ಪಂದ್ಯಾವಳಿಯಲ್ಲಿಎಸಿಸಿ ಮತ್ತು ಯಂಗ್ ಸ್ಟಾರ್ ನಡುವೆ ಫೈನಲ್ ಪಂದ್ಯಾವಳಿಯಲ್ಲಿಯಂಗ್ ಸ್ಟಾರ್ ತಂದು ಪ್ರಶಸ್ತಿ ಗೆದ್ದುಕೊಂಡಿತು.
ಕ್ರಿಕೆಟ್ ಪಂದ್ಯಾವಳಿ ಆಯೋಜಕ ಜಗದೀಶ ತಳಕಲ್ , ಪ.ಪಂ ಸದಸ್ಯ ಮಲ್ಲಿಕಾರ್ಜುನ ಚೌಧರಿ, ಯುವ ಮುಖಂಡರಾದ ಬಸವರಾಜ ಹಾಳಕೇರಿ, ರಮೇಶ ಶಾಸ್ತ್ರಿ, ಚಂದ್ರಶೇಖ ದೊಡ್ಡಮನಿ ಇದ್ದರು.
ಧಿ-
ಕೆಪಿಎಲ್ 21ಕೆಕೆಎನ್ ಪೋಟೊ: 3 ಕುಕನೂರು ಪಟ್ಟಣದ ವಿದ್ಯಾನಂದ ಗುರುಕುಲ ಕಾಲೇಜು ಆವರಣದಲ್ಲಿನಡೆದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ್ ಮತನಾಡಿದರು.