ಕನಕಗಿರಿ: ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ ಗೆ ಎಲ್ ಕೆಜಿ ತರಗತಿಗಳಲ್ಲಿಖಾಲಿ ಇರುವ ಸ್ಥಾನಗಳನ್ನು ಲಾಟರಿ ಮೂಲಕ ಶನಿವಾರ ಆಯ್ಕೆ ಮಾಡಲಾಯಿತು.ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿಎಲ್ ಕೆಜಿ ಮತ್ತು ಉಳಿದ ಸೀಟುಗಳಿಗೆ ಪಾಲಕರ ಮತ್ತು ಹಿರಿಯರ ಸಮ್ಮುಖದಲ್ಲಿಸ.ಪ.ಪೂ.ಕಾಲೇಜಿನ ಪ್ರಾಂಶುಪಾಲ ಅಮರೇಶ ದೇವರಾಳ ಚಾಲನೆ ನೀಡಿದರು.
ಒಟ್ಟು 81 ಅರ್ಜಿಗಳು ಬಂದಿದ್ದು, 60 ಸ್ಥಾನಗಳಿಗೆ ಆಯ್ಕೆ ಮಾಡಲಾಯಿತು. ಪ್ರಾಂಶುಪಾಲ ಅಮರೇಶ ದೇವರಾಳ ಮಾತನಾಡಿ, ‘‘ಮಕ್ಕಳನ್ನು ನಿರಂತರ ಶಾಲೆಗೆ ಕಳಿಸಬೇಕೆಂದು. ಮಕ್ಕಳಿಗೆ ಸಮವಸ್ತ್ರ, ಶೂ, ಪಠ್ಯ ಪುಸ್ತಕ ನೀಡಲಾಗುವುದು,’’ ಎಂದರು. ಉಪ ಪ್ರಾಂಶುಪಾಲ ಜಗದೀಶ್ ಅದಿಮನಿ, ಮುಖ್ಯ ಶಿಕ್ಷಕ ತುಳಜಾ ನಾಯಕ್ , ಶಿವಪುತ್ರಪ್ಪ, ಪಂಪಾರೆಡ್ಡಿ ಗಚ್ಚಿನಮನಿ, ಶರಣಯ್ಯ, ಶಿಕ್ಷಕಿ ಜ್ಯೋತಿ ಭತ್ತದ್ , ವಿಮಲಾಬಾಯಿ,
ಪುನೀತ್ , ಬಸವರಾಜ್ ಇದ್ದರು.
---
20ಕೆಎನ್ ಕೆಫೋಟೋ-4
ಕನಕಗಿರಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿಖಾಲಿ ಇರುವ ಸ್ಥಾನಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಯಿತು.