ವಿದ್ಯುತ್ ಖಾಸಗೀಕರಣ ಬೇಡ

Contributed bymanjuj24.7@gmail.com|Vijaya Karnataka
opposition to electricity privatization farmers union justifies government actions
ವಿದ್ಯುತ್ ಖಾಸಗೀಕರಣ ಬೇಡ

ಪರಶುರಾಂಪುರ: ರಾಜ್ಯದಲ್ಲಿವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗಿ ಕಂಪನಿಗೆ ಹಸ್ತಾಂತರಿಸುವ ಪ್ರಸ್ತಾಪವನ್ನು ಸರಕಾರ ಈ ಕೂಡಲೇ ಕೈಬಿಡಬೇಕು ಎಂದು ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಚಿಕ್ಕಣ್ಣ ತಿಳಿಸಿದರು.
ಗ್ರಾಮದ ಅಖಂಡ ಕರ್ನಾಟಕ ರೈತ ಸಂಘದ ಮುಖಂಡರು ಸರಕಾರ ವಿದ್ಯುತ್ ಖಾಸಗೀಕರಣಗೊಳಿಸುವುದನ್ನು ವಿರೋಧಿಸಿ ಸೊಮವಾರ ಗ್ರಾಮದಲ್ಲಿಪ್ರತಿಭಟನೆ ನಡೆಸಿ ಇಲ್ಲಿನ ಬೆಸ್ಕಾಂ ಹಾಗೂ ನಾಡ ಕಚೇರಿಗೆ ತೆರಳಿ ಮನವಿ ಸಲ್ಲಿಸಿ, ಮಾತನಾಡಿದರು.

ತಾಲೂಕು ಪ್ರಧಾನ ಕಾರ್ಯದರ್ಶಿ ಚೌಳೂರು ಎಚ್ .ಪ್ರಕಾಶ್ , ಹೋಬಳಿ ಅಧ್ಯಕ್ಷ ನವೀನ್ ಗೌಡ ಮಾತನಾಡಿದರು.

ರೈತ ಸಂಘದ ಮುಖಂಡರಾದ ಭಾಷಾಸಾಬ್ , ಜಂಪಣ್ಣ, ಹನುಮಂತರಾಯ, ರಜಾಕ್ ಸಾಬ್ , ಕೊಂಡ್ಲಿಪರಮೇಶ್ವರ್ , ಟ್ರ್ಯಾಕ್ಟರ್ ತಿಮ್ಮಣ್ಣ, ಅಣ್ಣಪ್ಪ, ರಮೇಶ್ , ರಾಜಣ್ಣ, ಶಾಂತನಗೌಡ, ಮುದ್ದಣ್ಣ, ಮಂಜಣ್ಣ, ರಂಗಸ್ವಾಮಿ, ನವೀನ್ ಗೌಡ, ರಾಮಚಂದ್ರಪ್ಪ, ಕುಸುಮಗಿರಿ ನರಸಿಂಹಮೂರ್ತಿ, ಹಾಲರಮೇಶ್ ಇದ್ದರು.

22ಪಿಆರ್ ಎಂಪಿ1

ಪರಶುರಾಂಪುರ ಗ್ರಾಮದಲ್ಲಿಸೋಮವಾರ ಗ್ರಾಮದ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಸರಕಾರ ವಿದ್ಯುತ್ ಖಾಸಗೀಕರಣ ಮಾಡುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.