ನಿವೇಶನ ಹಂಚಲು ಒತ್ತಾಯ

Contributed byshreekanta.akki@timesofindia.com|Vijaya Karnataka
demands for land distribution intensified pressure on the campaign
ನಿವೇಶನ ಹಂಚಲು ಒತ್ತಾಯ

ವಿಕ ಸುದ್ದಿಲೋಕ ಕೊಪ್ಪಳ
ಆಹ್ವಾನಿಸಿದ ಅರ್ಜಿಗಳ ಪ್ರಕಾರ ನಿವೇಶನ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿ ಫಲಾನುಭವಿಗಳು ನಗರದಲ್ಲಿಕರ್ನಾಟಕ ಗೃಹ ಮಂಡಳಿ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದರು.

ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳಿಗೆ 9 ವರ್ಷ ಕಳೆದರೂ ನಿವೇಶನ ಹಂಚಿಕೆ ಮಾಡಿಲ್ಲ. 18 ತಿಂಗಳೊಳಗೆ ನಿವೇಶನ ಅಭಿವೃದ್ಧಿಪಡಿಸಿ ಹಂಚಿಕೆ ಹಾಗೂ ವಿಳಂಬವಾದಲ್ಲಿಬ್ಯಾಂಕ್ ಬಡ್ಡಿ ದರದಂತೆ ಪರಿಹಾರ ನೀಡುವುದಾಗಿ ಭರವಸೆ ನೀಡಿತ್ತು. ಆದರೆ, ವರ್ಷಗಳೇ ಕಳೆದರೂ ಅಭಿವೃದ್ಧಿ ಕಾರ್ಯ ಪೂರ್ಣಗೊಂಡಿಲ್ಲ. ಪ್ರಸ್ತುತ 202 ಎಕರೆ ಪ್ರದೇಶದಲ್ಲಿ52 ಎಕರೆ ಭೂಮಿ ಅಭಿವೃದ್ಧಿಪಡಿಸಿ ಕೆಲವರಿಗೆ ಮಾತ್ರ ನಿವೇಶನ ಹಂಚಿಕೆ ಮಾಡಲಾಗಿದೆ. ಬಾಕಿ ಫಲಾನುಭವಿಗಳಿಗೂ ನಿವೇಶನ ಹಂಚಿಕೆ ಮಾಡಬೇಕು. ಇಲ್ಲವಾದರೆ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಮುಖಂಡರಾದ ನಿಂಗಪ್ಪ ಹನುಮಂತಪ್ಪ ಮೂಗಿನ, ಅನ್ನಪೂರ್ಣ ಹಾದಿಮನಿ, ಮಂಜುನಾಥ ಸುಂಕಪ್ಪ ಮುಳ್ಳಾಳ, ನಾಗರತ್ನಾ, ಕಾಶಪ್ಪ ಚಲವಾದಿ, ಕೊಟ್ರೇಶ್ ಹನುಮಂತಪ್ಪ ಅಳವಂಡಿ ಇದ್ದರು.