ಚುನಾವಣಾ ಆಯೋಗದ ಆದೇಶದಂತೆ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಜೂ.30ರಿಂದ ಆರಂಭಗೊಳ್ಳಲಿದೆ. ಈ ಸಂಬಂಧ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆಮನೆಗೆ ಬರಲಿದ್ದು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಉಪವಿಭಾಗಾಧಿಕಾರಿ, ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಚಂದ್ರಶೇಖರ ಜಿ.ಆರ್ ತಿಳಿಸಿದರು.ನಗರದಲ್ಲಿಮಂಗಳವಾದ ಮಾಧ್ಯಮದವರಿಗೆ ಈ ಕುರಿತು ವಿವರಣೆ ನೀಡಿದರು.
‘‘ಜೂ.30ರಿಂದ ಜುಲೈ 29ರವರೆಗೆ ಮತಗಟ್ಟೆ ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಲಿದ್ದು ಈ ವೇಳೆ ಮತದಾರರಿಗೆ ಎರಡು ಎನ್ಯುಮರೇಷನ್ ಅರ್ಜಿಗಳನ್ನು ನೀಡುವರು. ಮತದಾರರು ಈ ಎರಡು ಅರ್ಜಿಗಳನ್ನು ಭರ್ತಿ ಮಾಡಿ ಒಂದನ್ನು ಮತಗಟ್ಟೆ ಅಧಿಕಾರಿಗಳಿಗೆ ನೀಡಬೇಕು, ಇನ್ನೊಂದನ್ನು ತಮ್ಮ ಬಳಿಯೆ ಇಟ್ಟುಕೊಳ್ಳಬೇಕು. ಇವೆರಡಕ್ಕೂ ಮತದಾರರು ಅಥವಾ ಅವರ ಕುಟುಂಬದ ಸದಸ್ಯರು ಕಡ್ಡಾಯವಾಗಿ ಸಹಿ ಮಾಡಬೇಕಾಗುತ್ತದೆ. ಕರಡು ಮತದಾರರ ಪಟ್ಟಿ ಆಗಸ್ಟ್ 5ರಂದು ಪ್ರಕಟವಾಗಲಿದೆ. ನಂತರ ಸೆಪ್ಟೆಂಬರ್ 4ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಅಕ್ಟೋಬರ್ 7ಕ್ಕೆ ಅಂತಿಮ ಪಟ್ಟಿ ಪ್ರಕಟವಾಗಲಿದೆ ಎಂದು ತಿಳಿಸಿದರು.
ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದಲ್ಲಿಒಟ್ಟು 2,05,743 ಮತದಾರರಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ಪೂರ್ವ ತಯಾರಿಗಾಗಿ ಮತದಾರರ ವಿವರಗಳನ್ನು ಹೋಲಿಸಿ ಕ್ಷೇತ್ರದಲ್ಲಿಶೇ.95.71ರಷ್ಟು ಮತದಾರರ ಮಾಹಿತಿ ಮ್ಯಾಪಿಂಗ್ ಮಾಡಿ ಖಚಿತಪಡಿಸಿಕೊಳ್ಳಲಾಗಿದೆ. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಆರಂಭವಾಗುವವರೆಗೆ ಮ್ಯಾಪಿಂಗ್ ಪ್ರಕ್ರಿಯೆ ಮುಂದುವರಿಯಲಿದೆ’’ ಎಂದರು.
ತಹಸೀಲ್ದಾರ್ ಪಟ್ಟರಾಜ ಗೌಡ, ಕೃಷಿ ಅಧಿಕಾರಿ ಪಾಂಡು ಕೆ.ಎಚ್ ಇದ್ದರು.
ಬಾಕ್ಸ್
ಮತದಾರರ ಮಾಹಿತಿ
‘‘ಶಿರಸಿ ತಾಲೂಕಿನಲ್ಲಿ1,19507 ಮತದಾರರಿದ್ದು ಅದರಲ್ಲಿಈವರೆಗೆ 1,11,177ಮತದಾರರ ಮ್ಯಾಪಿಂಗ್ (ಮತದಾರರ ವಿವರ ಹೋಲಿಕೆ) ಮಾಡಲಾಗಿದೆ. ಸಿದ್ದಾಪುರ ತಾಲೂಕಿನಲ್ಲಿ86236 ಮತದಾರರಿದ್ದು, 83688ಮತದಾರರ ಮ್ಯಾಪಿಂಗ್ ಕೈಗೊಳ್ಳಲಾಗಿದೆ. ಈ ಮೂಲಕ ಹಿಂದೆ ಮತದಾರರ ಪಟ್ಟಿಯಲ್ಲಿದ್ದ ಹೆಸರು, ಮಾಹಿತಿಯನ್ನು ಆಯಾ ಮತದಾರರಿಗೆ ನೀಡುವ ಅರ್ಜಿಯಲ್ಲಿಒದಗಿಸಲಾಗುತ್ತದೆ. ಅದೇ ರೀತಿ ವಿಐಪಿ ಹಾಗೂ ಪಿಡಬ್ಲುಡಿ ಮತದಾರರ ಮ್ಯಾಪಿಂಗ್ ಸಹ ಮಾಡಲಾಗಿದೆ’’ ಎಂದು ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಚಂದ್ರಶೇಖರ ಜಿ.ಆರ್ ವಿವರಣೆ ನೀಡಿದರು.
ಕೋಟ್
ಅರ್ಹ ಮತದಾರರು ಪಟ್ಟಿಯಲ್ಲಿಸೇರಬೇಕು. ಅನರ್ಹ ಮತದಾರರಿದ್ದರೆ ಪಟ್ಟಿಯಿಂದ ಹೊರಗುಳಿಯಬೇಕು ಎಂಬ ಉದ್ದೇಶದಿಂದ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದೆ.