ಸಮರ್ಪಕ ವಿದ್ಯುತ್ ಪೂರೈಸಿ

Contributed byraja.bandihal@gmail.com|Vijaya Karnataka
farmers demand adequate electricity supply farmers spark protests at jesco office
ಸಮರ್ಪಕ ವಿದ್ಯುತ್ ಪೂರೈಸಿ

ವಿಕ ಸುದ್ದಿಲೋಕ ಹನುಮಸಾಗರ
ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಮನ್ನೇರಾಳ, ಮುದುಟಗಿ ಗ್ರಾಮಗಳ ರೈತರು ಜೆಸ್ಕಾಂ ಕಚೇರಿಗೆ ಮನವಿ ಸಲ್ಲಿಸಿದರು.

‘‘ಕಳೆದ 8 ದಿನದಿಂದ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ. 10 ರಿಂದ 15 ನಿಮಿಷಕ್ಕೊಮ್ಮೆ ಲೈನ್ ಟ್ರಿಪ್ ಆಗುತ್ತಿದೆ. ದಿನಕ್ಕೆ 5-6 ಬಾರಿ ವಿದ್ಯುತ್ ಕಡಿತ ಮಾಡಲಾಗುತ್ತಿದ್ದು, ಕೃಷಿ ಚಟುವಟಿಕೆ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಶೀಘ್ರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು,’’ ಎಂದು ರೈತರು ಆಗ್ರಹಿಸಿದರು.

ಜೆಸ್ಕಾಂ ಶಾಖಾಧಿಕಾರಿ ಮೌಲಾಸಾಬ್ ಮಾತನಾಡಿ, ‘‘ಈ ಭಾಗದಲ್ಲಿಕೃಷಿ ಪಂಪ್ ಸೆಟ್ ಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಈ ಸಮಸ್ಯೆಯಾಗುತ್ತಿದೆ. ಶೀಘ್ರ ಸಮಸ್ಯೆ ಬಗೆಹರಿಸಲಾಗುವುದು,’’ ಎಂದರು.

ಪರಸಪ್ಪ ಕೊಂಡಕೇರ, ಯಮನೂರ ಮಡಿವಾಳರ, ಶಾಮೀದ್ ಡಾಲಾಯತ್ , ರಾಮಣ್ಣ ಕೊಂಡಕೇರ, ಶಿವಯ್ಯ ಗಂಗಾವತಿಮಠ, ಬಸವರಾಜ ಹಕ್ಕಿ, ಉಮೇಶ ಮುಳಗುಂದ, ಅಹ್ಮದ್ ಸಾಬ್ ಚೌದರಿ, ಚಂದಪ್ಪ ಹಕ್ಕಿ ಇದ್ದರು.

* ಫೋಟೋ ಕ್ಯಾಪ್ಷನ್ : 23ಎಚ್ ಎಸ್ ಆರ್ 1

ರೈತರ ತೋಟಗಳಿಗೆ ಸರಿಯಾಗಿ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಹನುಮಸಾಗರದ ರೈತರು ಜೆಸ್ಕಾಂ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.