ಸ್ಮಾರ್ಟ್ ಕ್ಲಾಸ್ ಪ್ರಾಜೆಕ್ಟರ್ ಲೋಕಾರ್ಪಣೆ

Contributed byharishdivigihalli1@gmail.com|Vijaya Karnataka
technological advancement for rural children launch of smart class projector
ಹಿರೇಕೆರೂರು: ಸ್ಪರ್ಧಾತ್ಮಕ ಯುಗದಲ್ಲಿಗ್ರಾಮೀಣ ಮಕ್ಕಳು ಡಿಜಿಟಲ್ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ತಾಲೂಕಿನ ಕಳಗೊಂಡ ಶಾಲೆಯಲ್ಲಿ‘ ಸ್ಮಾರ್ಟ್ ಕ್ಲಾಸ್ ಪ್ರಾಜೆಕ್ಟರ್ ’ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಗ್ರಾಮೀಣ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಗುಣಮಟ್ಟದ ಶಿಕ್ಷಣ ಒದಗಿಸುವುದು ಅಗತ್ಯವಾಗಿದೆ. ಇದು ನಗರ-ಗ್ರಾಮೀಣ ಪ್ರದೇಶಗಳ ನಡುವಿನ ಶೈಕ್ಷಣಿಕ ಅಂತರ ಕಡಿಮೆ ಮಾಡುತ್ತದೆ ಎಂದರು.
ಎಂಸಿಎಫ್ ಕಂಪನಿ ಶಾಲೆಗಳಿಗೆ ಅತ್ಯಾಧುನಿಕ ಸ್ಮಾರ್ಟ್ ಕ್ಲಾಸ್ ಪ್ರಾಜೆಕ್ಟರ್ ಗಳನ್ನು ಕೊಡುಗೆಯಾಗಿ ನೀಡಿತು. ಎಸ್ ಡಿಎಂಸಿ ಅಧ್ಯಕ್ಷ ಮಹಾದೇವಪ್ಪ ಯಡಚಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ರವಿಶಂಕರ ಬಾಳಿಕಾಯಿ, ಮುಖ್ಯ ಶಿಕ್ಷಕ ಆರ್ . ಎಚ್ . ಹೂವಿನಮಡ, ಮಾಲಾತೇಶ ಮೂದಿಗೌಡ್ರ ಸಿಬ್ಬಂದಿ, ಗ್ರಾಮಸ್ಥರು ಇನ್ನಿತರರಿದ್ದರು.

24 ಹೆಚ್ ಕೆಆರ್ ಬಿ ಸಿ ಪಾಟೀಲ

ಹಿರೇಕೆರೂರ ತಾಲೂಕಿನ ಕಳಗೊಂಡ ಸರಕಾರಿ ಶಾಲೆಯಲ್ಲಿಸ್ಮಾರ್ಟ್ ಕ್ಲಾಸ್ ಪ್ರಾಜೆಕ್ಟರ್ ಗಳನ್ನು ಮಾಜಿ ಸಚಿವ ಬಿ.ಸಿ.ಪಾಟೀಲ ಲೋಕಾರ್ಪಣೆಗೊಳಿಸಿದರು.