ಬೆಂಗಳೂರು: ಸುಪ್ರೀಂ ಕೋರ್ಟ್ ನ ನಿರ್ದೇಶನದಂತೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ ನ (ಕೆಎಸ್ ಬಿಸಿ) 23 ಸದಸ್ಯ ಸ್ಥಾನಗಳಿಗೆ ಬುಧವಾರ ಶಾಂತಿಯುತ ಮತದಾನ ನಡೆಯಿತು.ನಗರದ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿಬಿಗಿ ಪೊಲೀಸ್ ಬಂದೋಬಸ್ ್ತ ನಡುವೆ ಬೆಳಗ್ಗೆಯಿಂದ ಸಂಜೆವರೆಗೆ ಮತದಾನ ನಡೆಯಿತು. ಮೆಯೋ ಹಾಲ್ , ಮ್ಯಾಜಿಸ್ಪ್ರೇಟ್ ನ್ಯಾಯಾಲಯ, ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಮತ್ತು ಹೈಕೋರ್ಟ್ ವಕೀಲರು ತಮ್ಮ ಮತ ಚಲಾಯಿಸಿದರು. ಕೆಎಸ್ ಬಿಸಿಯಲ್ಲಿಒಟ್ಟು 26 ಸದಸ್ಯ ಸ್ಥಾನಗಳಿದ್ದು, 23 ಸ್ಥಾನಗಧಿಳಿಧಿಗೆ ಚುನಾವಣೆ ನಡೆಯಿತು. ಕಣದಲ್ಲಿರುವ 149 ವಕೀಲರ ಭವಿಷ್ಯವನ್ನು ಸುಮಾರು 72 ಸಾವಿರ ಮತದಾರರು ನಿರ್ಧರಿಸಲಿದ್ದಾರೆ.

