ಸುರತ್ಕಲ್ನ ಕಳುವಾರು ಶ್ರೀ ಬೆಂಕಿನಾಥೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಸಿದ್ಧತೆ ಭರದಿಂದ ಸಾಗಿದೆ. ಫೆಬ್ರವರಿ 8ರಿಂದ ನಿತ್ಯ ಸಂಜೆ ನಡೆಯುತ್ತಿರುವ ಸಂಧ್ಯಾ ಭಜನೆ ಮಾರ್ಚ್ 28ರ ವರೆಗೆ ಮುಂದುವರೆಯಲಿದೆ. ಗುರುವಾರ ಭಜನೆಯು 33ನೇ ದಿನಕ್ಕೆ ತಲುಪಿದ್ದು, ಸಸಿಹಿತ್ಲು ಭಜನಾ ಮಂಡಳಿಯವರು ಭಜನೆ ನಡೆಸಿಕೊಟ್ಟರು. ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಸುರತ್ಕಲ್ : ಕಳುವಾರು ಶ್ರೀ ಬೆಂಕಿನಾಥೇಶ್ವರ ದೇವಸ್ಥಾನದಲ್ಲಿಮಾ. 20ರಿಂದ ಮಾ. 29ರ ತನಕ ನಡೆಯಲಿರುವ ಬ್ರಹ್ಮಕಲಶೋತ್ಸವ ಪ್ರಯುಕ್ತ ಫೆ. 8ರಿಂದ ಮಾ. 28 ರ ವರೆಗೆ ನಿತ್ಯ ಸಂಜೆ 6ರಿಂದ 7.30ರ ವರೆಗೆ ನಡೆಯುತ್ತಿರುವ ಸಂಧ್ಯಾ ಭಜನಾ ಕಾರ್ಯಕ್ರಮ ಗುರುವಾರ 33ನೇ ದಿನಕ್ಕೆ ಕಾಲಿರಿಸಿದ್ದು ಸಸಿಹಿತ್ಲುಭಜನಾ ಮಂಡಳಿಯವರಿಂದ ಭಜನೆ ನಡೆಯಿತು. ಬ್ರಹ್ಮಕಲಶೋತ್ಸವ ಸಮಿತಿ, ನಾನಾ ಉಪಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಭಕ್ತರು ಭಾಗವಹಿಸಿದ್ದರು.