15 ಎಎಲ್ಡಿ 1:
ಆಳಂದ ಪಟ್ಟಣದ ಅಲ್ಲಾಕಟ್ಟಾ ಹತ್ತಿರ ಎಪಿಎಂಸಿ ಮಾಜಿ ಸದಸ್ಯ ರೇವಣಸಿದ್ದಪ್ಪ ನಾಗೂರೆ ಅವರು ರಂಜಾನ್ ಉಪಾಸಿಕರಿಗೆ ಇಫ್ತಾರ್ ಕೂಟ ಏರ್ಪಡಿಸಿದರು.
ರಂಜಾನ್ ಉಪಾಸಿಕರಿಗೆ ಇಫ್ತಾರ್ ಕೂಟ
ವಿಕ ಸುದ್ದಿಲೋಕ ಆಳಂದ
ಪಟ್ಟಣದ ಅಲ್ಲಾಕಟ್ಟಾ ಹತ್ತಿರ ಎಪಿಎಂಸಿ ಮಾಜಿ ಸದಸ್ಯ ರೇವಣಸಿದ್ದಪ್ಪ ನಾಗೂರೆ ಅವರು ರಂಜಾನ್ ಉಪಾಸಿಕರಿಗೆ ಇಫ್ತಾರ್ ಕೂಟ ಏರ್ಪಡಿಸಿದರು.
ಬಳಿಕ ಮಾತನಾಡಿದ ಅವರು, ಪ್ರತಿವರ್ಷ ನಾವು ಪವಿತ್ರ ರಂಜಾನ್ ಹಬ್ಬದ ನಿಮಿತ್ತ ಉಪಾಸಿಕರಿಗೆ ಇಫ್ತಾರ್ ಕೂಟ ಆಯೋಜಿಸಿ ಹಣ್ಣು ಹಂಪಲು, ಊಟ ನೀಡಲಾಗುತ್ತಿದೆ. ಇದೊಂದು ಹಿಂದೂ-ಮುಸ್ಲಿಂ ನಡುವಿನ ಸೌಹಾರ್ದ ಕೂಟವಾಗಿದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಫಿರ್ದೋಸ್ ಅನ್ಸಾರಿ, ಮಾಜಿ ಸದಸ್ಯ ಮಲ್ಲಪ್ಪ ಹತ್ತರಕಿ, ಗುಲಾಮಹುಸೇನ್ ಟಪ್ಪೆವಾಲೆ, ನ್ಯಾಯವಾದಿ ಮಹಾದೇವ ಹತ್ತಿ, ದಿಲೀಪ ಕ್ಷೀರಸಾಗರ ಕೊತನಹಿಪ್ಪರಗಿ, ಮುಖಂಡ ಮುನ್ನಾ ಹಡಗಿ, ರತ್ನಾಕರ ಕುಂಬಾರ, ಶಿವಾನಂದ ನಾಗೂರೆ, ಮಲ್ಲಿಕಾರ್ಜುನ ಮಾಳಿ, ದಿನೇಶ ಪಾಟೀಲ್ , ಬಸವರಾಜ ಪಾಟೀಲ್ , ಸತೀಶ ಪಾಟೀಲ್ , ಅಬುಲ್ ಖಾದಾರ್ , ಆಸೀಫ ಚೌಸ್ ಸೇರಿ ಮುಖಂಡರು, ಯುವಕರು ಇಧಿದ್ದಧಿರು.

