ಬೆಂಗಳೂರು: 2026ನೇ ಸಾಲಿನ ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ’ಗೆ ಲೇಖಕ/ಕಿಯರಿಂದ ಕಥೆಗಳನ್ನು ಆಹ್ವಾನಿಸಲಾಗಿದೆ. ಈ ಸ್ಪರ್ಧೆಯಲ್ಲಿಪ್ರಥಮ ಬಹುಮಾನವಾಗಿ 50 ಸಾವಿರ, ದ್ವಿತೀಯ 25 ಸಾವಿರ ಹಾಗೂ ತೃತೀಯ 15 ಸಾವಿರ ರೂಪಾಯಿ ನಗದು ನೀಡಲಾಗುತ್ತದೆ. ಉಳಿದಂತೆ ಐದು ಕಥೆಗಳಿಗೆ ತಲಾ 5 ಸಾವಿರ ರೂ.ಗಳ ಸಮಾಧಾನಕರ ಬಹುಮಾನ ಹಾಗೂ ಅಂತಿಮ ಸುತ್ತಿಗೆ ಆಯ್ಕೆಯಾಗುವ ಉಳಿದ 17 ಕಥೆಗಳಿಗೆ ತಲಾ 2 ಸಾವಿರ ರೂಪಾಯಿ ಗೌರವಧನ ನೀಡಲಾಗುವುದು. ಆಯ್ಕೆಯಾದ ಒಟ್ಟು 25 ಕಥೆಗಳನ್ನು ಒಳಗೊಂಡ ಪುಸ್ತಕವನ್ನು ಪ್ರಕಟಿಸಲಾಗುವುದು. ಎಲ್ಲಿಯೂ ಪ್ರಕಟವಾಗದ ಸ್ವತಂತ್ರ ಕಥೆಯಾಗಿರಬೇಕು. ಪದಮಿತಿ, ವಯಸ್ಸಿನ ನಿರ್ಬಂಧ ಇಲ್ಲ. ಕಥೆಯಿರುವ ಪುಟಗಳಲ್ಲಿತಮ್ಮ ಹೆಸರು ದಾಖಲಿಸದæೕ, ಪ್ರತ್ಯೇಕ ಪುಟದಲ್ಲಿತಮ್ಮ ಹೆಸರು, ಪೂರ್ಣ ವಿಳಾಸ ಮತ್ತು ಮೊಬೈಲ್ ಸಂಖ್ಯೆ ಇರಬೇಕು. 15,ಮೇ 2026ರೊಳಗೆ ಕಳಿಸಬೇಕು. ಕಥೆಗಳನ್ನು ಇ-ಮೇಲ್ ಮೂಲಕ (ನುಡಿ/ ಯೂನಿಕೋಡ್ ಫಾಂಟ್ ಬಳಸಿ ಟೈಪಿಸಿದ ಪ್ರತಿ)ಚಿಚಿks2026ಃಚಿಟಟkಚ್ಟಿahಞa.್ಚಟಞ ಅಥವಾ ಹಸ್ತಪ್ರತಿ ಯನ್ನು ಪ್ರಧಾನ ಸಂಪಾದಕರು, ಬುಕ್ ಬ್ರಹ್ಮ ಕನ್ನಡ ಮೂರನೇ ಮಹಡಿ, ಆರ್ .ಕೆ ಕಾಂಪ್ಲೆP್ಸ… ಕೆಎಸ್ ಎಸ್ ಐಡಿಸಿ ಆವರಣ ಎಲೆಕ್ಟ್ರಾನಿP್ಸ… ಸಿಟಿ ಮೊದಲ ಹಂತ, ಬೆಂಗಳೂರು-560100 ಕ್ಕೆ ಕಳುಹಿಸಿಕೊಡಬಹುದು.

