6ರಂದು ಪ್ರಶಸ್ತಿ ಪ್ರದಾನ
ಇಂಡಿ: ತಾಲೂಕಿನ ಹರಳಯ್ಯನಹಟ್ಟಿ (ಬೆನಕನಳ್ಳಿ)ಯಲ್ಲಿಮಾ.6 ರಂದು ಬೆಳಗ್ಗೆ 10ಕ್ಕೆ ಅಪ್ಪ ಅವ್ವ ಕಲಾ ಮತ್ತು ಸಾಹಿತ್ಯ, ಸಂಸ್ಕೃತಿ ಸಂಸ್ಥೆಯಿಂದ ದಿ.ಚಂದ್ರಾಮ ಹೊನ್ನಕಟ್ಟಿ (ಮಾಸ್ತರ) ಅವರ 24ನೇ ಪುಣ್ಯಾರಾಧನೆ ನಿಮಿತ್ತ ರಾಜ್ಯ ಮಟ್ಟದ ಮಾಸ್ತರ ಪ್ರಶಸ್ತಿ , ಸಾಧಕರಿಗೆ ಕಾಯಕ ಪ್ರಶಸ್ತಿ ಪ್ರದಾನ ಹಾಗೂ ಸಿದ್ದೇಶ್ವರ ಸ್ವಾಮೀಜಿಗಳ ನುಡಿನಮನ ಕಾರ್ಯಕ್ರಮ ನಡೆಯಲಿದೆ. ಡಾ.ಜ್ಯೋತಿರ್ಲಿಂಗ ಹೊನ್ನಕಟ್ಟಿ ಸಿಪಿಐ ಹುಬ್ಬಳ್ಳಿ, ಧಾರವಾಡ ಇವರು ಚಂದ್ರಾಮ ಮಾಸ್ತರ ಬದುಕು, ಪ್ರೊ.ಬಿ.ಆರ್ .ಪೊಲೀಸ ಪಾಟೀಲ ಅವರ ಇನ್ನೆಸು ದಿನ ಇರತಿ ಪುಸ್ತಕ ಬಿಡುಗಡೆಗೊಳ್ಳಲಿದೆ ಸಿಪಿಐ ಪ್ರಕಟಣೆಯಲ್ಲಿತಿಳಿಸಿದ್ದಾರೆ.

