ನಾಧಿಟಕ ಕಲೆಗೆ ಪ್ರೋಧಿತ್ಸಾಧಿಹಿಸಿ
ವಿಕ ಸುದ್ದಿಲೋಕ ಬಳ್ಳಾರಿ
‘ಧಿ‘ವ್ಯಕ್ತಿಯ ಭಾವನೆಗಳಿಗೆ ಜೀವ ತುಂಬುವ ಶಕ್ತಿ ನಾಟಕಕ್ಕಿದೆ. ಕಲೆಯನ್ನು ಪ್ರೋತ್ಸಾಹಿಸಬೇಕು,’ಧಿ’ ಎಂದು ಸರಕಾರಿ ವಕೀಲ ವಿ.ಜನಾರ್ಧನ್ ಹೇಳಿದರು.
ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿಸಮತಾ ಸಾಹಿತಿ ಟ್ರಸ್ವ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿಹಮ್ಮಿಕೊಂಡಿದ್ದ ನೃತ್ಯ ಮತ್ತು ಹಾಸ್ಯ ನಾಟಕ ಪ್ರದರ್ಶನ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
‘ಧಿ‘ನಮ್ಮ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿವಿದ್ಯಾರ್ಥಿಗಳ ಪಾಲು ದೊಡ್ಡದು. ನಾಟಕದಲ್ಲಿಅಭಿನಯಿಸುವುದರಿಂದ ವಿದ್ಯಾರ್ಥಿಗಳ ಕೌಶಲ ಬೆಳೆಯುತ್ತದೆ,’ಧಿ’ ಎಂದರು.
ಸಮತಾ ಸಾಹಿತಿ ಟ್ರಸ್ವ್ ಅಧ್ಯಕ್ಷ ಡಾ.ಕೆ.ಸುರೇಂದ್ರ ಬಾಬು ಮಾತನಾಡಿದರು. ಮುಖಂಡರಾದ ಡಾ.ಗೋಪಾಲಕೃಷ್ಣ, ಬಿ.ಭಾಸ್ಕರ ನಾಯ್ಡು, ಹಳ್ಳಿಮನೆ ದೊಡ್ಡಬಸಪ್ಪ, ಸಿ.ತಿಪ್ಪಯ್ಯ ಶೆಟ್ಟಿ, ಡಿ.ಕೆ.ಪ್ರಸಾದ್ ಇತರರಿದ್ದರು.
ಲಕ್ಷ್ಮಿಪ್ರಿಯ, ಕೆ.ರಾಧಿಧಾಕೃಷ್ಣ, ಎಸ್ .ಪ್ರಗತಿ ಅವರು ನೃತ್ಯ ಪ್ರದರ್ಶಿಸಿದರು. ಶ್ರೀಲಾಲ್ ರೆಡ್ಡಿ ತಂಡದಿಂದ ‘ಬೀಗರೋ-ಬೀಗರೋ’ ಹಾಸ್ಯ ನಾಟಕ ಪ್ರದರ್ಶನವಾಯಿತು. ನಾಟಕದಲ್ಲಿಎಂ.ರಾಮಾಂಜನೇಯಲು, ಟಿ.ನಾಗಭೂಷಣ, ಕೆ.ಸುರೇಂದ್ರ ಬಾಬು, ಲಾಲ್ ರೆಡ್ಡಿ, ನೇತಿ ರಘುರಾಂ, ಜಿ.ಜ್ಯೋತಿ, ಭೀಮನೇನಿ ಪ್ರಸಾದ, ಜಿ.ನಾಗನಗೌಡ, ಜಿ.ವೆಂಕಟೇಶ, ರಮಣಪ್ಪ ಭಜಂತ್ರಿ ಅಭಿನಯಿಸಿದರು. ನಾಟಕಕ್ಕೆ ಮುದ್ದಟನೂರು ತಿಪ್ಪೆಸ್ವಾಮಿ ಅವರು ಸಂಗೀತ ನಿರ್ದೇಶನ ನೀಡಿದರು.
03 ಮಾರುತಿ 01
ಬಳ್ಳಾರಿಯ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿನೃತ್ಯ ಮತ್ತು ಹಾಸ್ಯ ನಾಟಕ ಪ್ರದರ್ಶನ ನಧಿಡೆಧಿಯಿತು.

