ಕಾಸರಗೋಡು : ಮಂಜೇಶ್ವರ ತಾಲೂಕಿಗೆ ತನ್ನದೇ ಆದ ಶಾಶ್ವತ ಕಚೇರಿ ಕಟ್ಟಡವನ್ನು ಮಂಜೂರು ಮಾಡಲು ತಾಲೂಕು ಅಭಿವೃದ್ಧಿ ಸಮಿತಿ ಸಭೆ ಪ್ರಸ್ತಾಪಿಸಿದೆ.
ಮಂಜೇಶ್ವರ ತಾಲೂಕು ಸಭಾಂಗಣದಲ್ಲಿ ಸಭೆ ಸೇರಿದ ಅಭಿವೃದ್ಧಿ ಸಮಿತಿಯು ಈ ಬೇಡಿಕೆಯನ್ನು ಮುಂದಿಟ್ಟಿತು. 2014 ರಲ್ಲಿರಚನೆಯಾದ ಮಂಜೇಶ್ವರ ತಾಲೂಕು ಕಚೇರಿಯು ಸ್ವಂತ ಕಟ್ಟಡವಿಲ್ಲದೆ ತಾತ್ಕಾಲಿಕ ಕಟ್ಟಡದಲ್ಲಿಕಾರ್ಯನಿರ್ವಹಿಸುತ್ತಿದೆ. ಇದು ಸಾರ್ವಜನಿಕ ಸೇವೆಗೆ ಸಮಸ್ಯೆಯಾಗುತ್ತಿದೆ ಎಂದು ಸಭೆಯು ಗಮನಿಸಿತು.
ಮಂಜೇಶ್ವರ ತಾಲೂಕಿನ ಜನರ ಆಡಳಿತ ಮತ್ತು ಅಭಿವೃದ್ಧಿ ಅಗತ್ಯಗಳನ್ನು ಪೂರೈಸಲು ಶಾಶ್ವತ ಕಚೇರಿ ಕಟ್ಟಡ ಅತ್ಯಗತ್ಯ ಎಂದು ಅಭಿವೃದ್ಧಿ ಸಮಿತಿಯು ಅವಲೋಕಿಸಿದೆ.ಜಿಲ್ಲಾಪಂಚಾಯಿತಿ ಸದಸ್ಯ ಹರ್ಷದ್ ವರ್ಕಾಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಮಂಜೇಶ್ವರ ತಹಸೀಲ್ದಾರ್ ಪಿ.ಸಜಿತ್ ಸ್ವಾಗತಿಸಿದರು. ಸಭೆಯಲ್ಲಿಜನÜ ಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

