ಬಲಮುರಿಯಲ್ಲಿಕ್ಯಾಮೆರಾ ಕಣ್ಗಾವಲು

Contributed byShridevi Ambekallu|Vijaya Karnataka

ಮಂಡ್ಯದ ಬಲಮುರಿಯಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ವಾರಾಂತ್ಯದಲ್ಲಿ ಇಲ್ಲಿಗೆ ಬರುವ ಯುವಕರು ನೀರಿನಲ್ಲಿ ಇಳಿಯುವಾಗ ಪ್ರಾಣ ಕಳೆದುಕೊಳ್ಳುವ ಘಟನೆಗಳು ನಡೆದಿವೆ. ಇದನ್ನು ತಡೆಯಲು ಬಲಮುರಿ ದೇವಾಲಯಗಳ ಅಭಿವೃದ್ಧಿ ಸಮಿತಿಯು ಮೂರು ಕಡೆ ಕ್ಯಾಮೆರಾಗಳನ್ನು ಅಳವಡಿಸಿದೆ. ಇದು ಭಕ್ತರ ಸುರಕ್ಷತೆಗೆ ಸಹಕಾರಿಯಾಗಲಿದೆ.

balumuriyalli camera surveillance installation of cctv for tourist safety

ಬಲಮುರಿಯಲ್ಲಿಕ್ಯಾಮೆರಾ ಕಣ್ಗಾವಲು

-------

ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಪ್ರಮುಖ ಪ್ರವಾಸಿ ತಾಣ ಬಲಮುರಿಯಲ್ಲಿಭಕ್ತರ ಸುರಕ್ಷತೆಯ ದೃಷ್ಟಿಯಿಂದ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.

ವಾರಾಂತ್ಯದಲ್ಲಿನೀರಿನ ತಾಣ ಅರಸಿಕೊಂಡು ಬರುವ ಜನರು, ಅದರಲ್ಲೂಯುವಜನರು ನೀರಿಗಿಳಿಯುವುದು ಸಹಜ. ಇಂತಹ ಸಂದರ್ಭದಲ್ಲಿನೀರಿನ ಸೆಳೆತಕ್ಕೆ ಅಥವಾ ಸುಳಿಗೆ ಸಿಲುಕಿ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅದಕ್ಕೆಲ್ಲಾಕಡಿವಾಣ ಹಾಕುವ ನಿಟ್ಟಿನಲ್ಲಿ ಬಲಮುರಿ ದೇವಾಲಯಗಳ ಅಭಿವೃದ್ಧಿ ಸಮಿತಿಯು ಬಲಮುರಿ ತಾಣದ 3 ಸ್ಥಳಗಳಲ್ಲಿಈಗಾಗಲೇ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದೆ.