ಇಂದು ಬಳಸಿ........

Contributed bypavanpvk123@gmail.com|Vijaya Karnataka
farmers in hunagund declare drought hit protests for relief
ಹುನಗುಂದ ತಾಲೂಕು ಬರಪಟ್ಟಿಗೆ ಸೇರಿಸಿ

ವಿಕ ಸುದ್ದಿಲೋಕ ಹುನಗುಂದ
‘‘ವಿಳಂಬ ಮಾಡದೆ ಹುನಗುಂದ ತಾಲೂಕನ್ನು ಬರಪೀಡಿತ ಎಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು,’’ ಎಂದು ಗಚ್ಚಿನಮಠದ ಅಮರೇಶ್ವರ ದೇವರು ಆಗ್ರಹಿಸಿದರು.

ಪಟ್ಟಣದ ಸಂಗಮೇಶ್ವರ ಮಂಗಲಭವನದಲ್ಲಿಹುನಗುಂದ ತಾಲೂಕು ಬರ ಪಟ್ಟಿಯಲ್ಲಿಸೇರಿಸುವಂತೆ ಮತ್ತು ಬೆಳೆ ನಷ್ಟ ಪರಿಹಾರ ನೀಡಲು ಆಗ್ರಹಿಸಿ ಕೈಗೊಳ್ಳಲಿರುವ ಹೋರಾಟದ ಪೂರ್ವ ಸಿದ್ಧತೆ ಸಭೆಯಲ್ಲಿಅವರು ಮಾತನಾಡಿದರು.

ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹುನಗುಂದ ತಾಲೂಕನ್ನು ಬರಪೀಡಿತ ಎಂದು ಘೋಷಿಸುವಂತೆ ಸರಕಾರವನ್ನು ಒತ್ತಾಯಿಸಲು ರೈತರು ಒಗ್ಗೂಡಬೇಕು. ನಿಗದಿಪಡಿಸುವ ದಿನಾಂಕದಂದು ತಾಲೂಕಿನ ಗ್ರಾಮಗಳ ರೈತರು ಹೋರಾಟದಲ್ಲಿಭಾಗವಹಿಸಬೇಕು. ಬಿತ್ತನೆ ಮಾಡಿದ ತೊಗರಿ, ಮೆಕ್ಕೆಜೋಳ ಸೇರಿದಂತೆ ನಾನಾ ಬೆಳೆಗಳು ನೀರಿನ ಕೊರತೆಯಿಂದ ಒಣಗುತ್ತಿದ್ದು, ಜಾನುವಾರುಗಳಿಗೆ ಮೇವಿನ ಸಮಸ್ಯೆಯೂ ಎದುರಾಗಿದೆ,’’ ಎಂದರು.

ಸರಕಾರ ರೈತರ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಹುನಗುಂದ ತಾಲೂಕನ್ನು ಬರ ಘೋಷಣೆ ಮಾಡದಿದ್ದರೆ ತಾಲೂಕು ಮಟ್ಟದಲ್ಲಿಹೋರಾಟ ಕೈಗೊಳ್ಳುವುದರ ಜತೆಗೆ ಕೂಡಲಸಂಗಮಕ್ಕೆ ಬರುವ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ಸಭೆಯಲ್ಲಿಚರ್ಚಿಸಲಾಯಿತು.

ರೈತ ಮುಖಂಡ ಸಂಗಮೇಶ ಬೆಳ್ಳಿಹಾಳ, ಅಶೋಕ ಪೈಲ್ , ಲಿಂಬಣ್ಣ ಮುಕ್ಕಣ್ಣವರ, ಬಸನಗೌಡ ದಾದ್ಮಿ, ಶರಣಪ್ಪ ದಿವಟಗಿ, ಪರಸಪ್ಪ ಕೋಲಾರ, ಶ್ರೀಕಾಂತ ಬಾವಿಕಟ್ಟಿ, ನಿಂಗಪ್ಪ ಬಡಿಗೇರ, ನಾಗಪ್ಪ ತ್ಯಾಪಿ, ಗಿರಿಮಲ್ಲಪ್ಪ ಹಳಪೇಟಿ, ಮಂಜು ಕೋಲಾರ, ಸಂಗಣ್ಣ ಕರಂಡಿ, ಮಲ್ಲಣ್ಣ ಕುಂಟೋಜಿ, ಪರಸಪ್ಪ ಪಲ್ಲೇದ ಮತ್ತಿತರರಿದ್ದರು.

3;ಎಚ್ ಎನ್ ಡಿ;3

ಹುನಗುಂದ ತಾಲೂಕು ಬರಪಟ್ಟಿಯಲ್ಲಿಸೇರಿಸಲು ಆಗ್ರಹಿಸಿ ನಡೆಸಲು ಉದ್ದೇಶಿಸಿರುವ ಹೋರಾಟದ ಪೂರ್ವಭಾವಿ ಸಭೆಯಲ್ಲಿಅಮರೇಶ್ವರ ದೇವರು ಮಾತನಾಡಿದರು.