ನಗರದ ರೋಟರಿ ವುಡ್ಸ್ ವತಿಯಿಂದ ಪ್ರಕೃತ್ತಿಗೆ ಧಕ್ಕೆ ತಾರದಿರಿ ಎಂಬ ಸಂದೇಶದ ಬೈಕ್ ಜಾಥಾ ಆಯೋಜಿತವಾಗಿತ್ತು.ಮಡಿಕೇರಿಯಿಂದ ಭಾಗಮಂಡಲ - ಕರಿಕೆ- ಪೆರಾಜೆ- ಸಂಪಾಜೆ ಮಾರ್ಗವಾಗಿ 150 ಕಿ.ಮೀ. ಸಾಗಿದ ರೋಟರಿ ವುಡ್ಸ್ ಬೈಕ್ ಸವಾರರು ಸಾರ್ವಜನಿಕರಿಗೆ ಪರಿಸರ ಸಂರಕ್ಷಣೆಯ ಸಂದೇಶ ಸಾರಿದರು. ರೋಟರಿ ಬೈಕ್ ರಾರ ಯಲಿ - ರೋಬಿ ಹೆಸರಿನ ಜಾಥಾದಲ್ಲಿಅನೇಕ ಗ್ರಾಮಗಳಲ್ಲಿಪರಿಸರ ಮಾಲಿನ್ಯ ಮಾಡದಿರಿ ಎಂಬ ಜಾಗ್ರತಿಯನ್ನು ಮೂಡಿಸಲಾಯಿತು.
ಮಡಿಕೇರಿಯಲ್ಲಿಬೈಕ್ ಜಾಥಾಕ್ಕೆ ರೋಟರಿ ಜಿಲ್ಲಾನಿರ್ದೇಶಕ ಅನಿಲ್ .ಎಚ್ .ಟಿ ಚಾಲನೆ ನೀಡಿ ಮಾತನಾಡಿ, ‘‘ರೋಟರಿ ವುಡ್ಸ್ ನ ಉತ್ಸಾಹಿ ಬೈಕ್ ಸವಾರರು, ಎರಡನೇ ವರ್ಷವೂ ಬೈಕ್ ಜಾಥಾದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಕಾರ್ಯ ಕೈಗೊಂಡಿದ್ದಾರೆ ಎಂದು ಶ್ಲಾಘಿಘಿಸಿದರು. ಮುಂದಿನ ದಿನಗಳಲ್ಲೂಇನ್ನಷ್ಟು ಸಂದೇಶಗಳೊಡನೆ ಬೈಕ್ ರಾರ ಯಲಿ ನಡೆಸುಂತಾಗಲಿ,’’ ಎಂದು ಹಾರೈಸಿದರು.