ನೈಸರ್ಗಿಕ ಬಾಳೆಹಣ್ಣು ವಿತರಿಸಿ

Contributed bygvittalslb@gmail.com|Vijaya Karnataka
fight against contaminated bananas petition to tehsildar for distribution of natural bananas
ನೈಸರ್ಗಿಕ ಬಾಳೆಹಣ್ಣು ವಿತರಿಸಿ

* ಸೂಕ್ತ ಕ್ರಮಕ್ಕೆ ತಹಸೀಲ್ದಾರ್ ಗೆ ಮನವಿ
ವಿಕ ಸುದ್ದಿಲೋಕ ಕೊಪ್ಪಳ

ಜಿಲ್ಲೆಯ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿಬಿಸಿಯೂಟ ಯೋಜನೆಯಡಿ ಮಕ್ಕಳಿಗೆ ನೀಡಲಾಗುತ್ತಿರುವ ನಿಷೇಧಿತ ಹಾಗೂ ರಾಸಾಯನಿಕ ಮಿಶ್ರಿತ ಬಾಳೆಹಣ್ಣು ವಿತರಣೆಗೆ ಕಡಿವಾಣ ಹಾಕುವಂತೆ

ಆಗ್ರಹಿಸಿ ಶಾಲಾ-ಕಾಲೇಜುಗಳ ಹಿತರಕ್ಷಣಾ ಹೋರಾಟ ಸಮಿತಿಯಿಂದ ತಹಸೀಲ್ದಾರ್ ರವಿಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

‘‘ವಿಷ ಪೂರಿತ ಹಣ್ಣು ಪೂರೈಕೆ ಮಾಡುವ ವ್ಯಾಪಾರಿಗಳ ಪರವಾನಗಿ ರದ್ದುಗೊಳಿಸಿ, ಕ್ರಿಮಿನಲ್ ಕೇಸ್ ದಾಖಲಿಸಬೇಕು. ನೈಸರ್ಗಿಕವಾಗಿ ಮಾಗಿದ ಹಣ್ಣು ವಿತರಿಸಬೇಕು,’’ ಎಂದು ಆಗ್ರಹಿಸಿದರು.

ಶಾಲಾ-ಕಾಲೇಜುಗಳ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಎಸ್ .ಎ.ಗಫಾರ್ , ಪ್ರಗತಿಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಮುಖ್ಯ ಸಂಚಾಲಕ ಬಸವರಾಜ್ ಶೀಲವಂತರ್ , ಪಾಸ್ಟರ್ಸ್ ಅಸೋಸಿಯೇಶನ್ ಜಿಲ್ಲಾಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್ , ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾಸಂಚಾಲಕ ತುಕಾರಾಮ್ ಪಾತ್ರೋಟಿ, ಕೊಳಚೆ ನಿರ್ಮೂಲನಾ ವೇದಿಕೆ ಸಂಚಾಲಕ ಮಖಬೂಲ್ ರಾಯಚೂರು, ವಿದ್ಯಾರ್ಥಿ ಸಂಘಟನೆ ಸಂಘರ್ಷ ಬಿ.ಶೀಲವಂತರ್ , ಆದಿತ್ಯಾ ಟಿ.ಪಾತ್ರೋಟಿ ಇದ್ದರು.

* 1-ವಿಠ್ಠಲ-25

ಶಾಲಾ- ಕಾಲೇಜುಗಳ ಹಿತರಕ್ಷಣಾ ಹೋರಾಟ ಸಮಿತಿಯಿಂದ ಕೊಪ್ಪಳದಲ್ಲಿತಹಸೀಲ್ದಾರ್ ರವಿ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.