ಸುಳ್ಯದಲ್ಲಿವಿಶ್ವಕರ್ಮ ಜಯಂತಿ ಆಚರಣೆ

Contributed bympadmanabha51@gmail.com|Vijaya Karnataka
inauguration of vishwakarma jayanti in sullia by mla bhagirthi murulya
ವಿಕ ಸುದ್ದಿಲೋಕ ಸುಳ್ಯ

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ವಿಶ್ವಕರ್ಮ ಜಯಂತಿ ಆಚರಣೆ ಸುಳ್ಯದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿಗುರುವಾರ ನಡೆಯಿತು.
ಶಾಸಕಿ ಭಾಗೀರಥಿ ಮುರುಳ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಶ್ವಕರ್ಮ ಸಮುದಾಯದ ಶಿಲ್ಪಿಗಳಲ್ಲಿಕೌಶಲ್ಯಗಳಿವೆ. ಈ ಕೌಶಲ್ಯಭರಿತವಾದ ಅವರ ಕಲೆಗಳಿಂದ ಮನೆ, ದೇವಸ್ಥಾನಗಳು, ರಥಗಳು ಸುಂದರವಾಗಿ ಮೂಡುತ್ತದೆ. ಅವರ ಕೈಯಲ್ಲಿಮಾತ್ರ ಅದಕ್ಕೆಲ್ಲಅಂತಿಮ ಸ್ಪರ್ಶ ನೀಡಲು ಸಾಧ್ಯ ಎಂದು ಹೇಳಿದರು.

ಸುಳ್ಯ ಸುಡಾ ಅಧ್ಯಕ್ಷ ಕೆ.ಎಂ.ಮುಸ್ತಫಾ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಕೆಎಂಎಫ್ ವಿಸ್ತರಣಾ ಅಧಿಕಾರಿ ಶಿವಕುಮಾರ್ ಮುಖ್ಯ ಅತಿಥಿಗಳಾಗಿದ್ದರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷೆ, ತಹಸೀಲ್ದಾರ್ ಮಂಜುಳಾ, ಇ.ಒ. ರಾಜಣ್ಣ ಉಪಸ್ಥಿತರಿದ್ದರು. ಕೆಡಿಪಿ ಸದಸ್ಯರಾದ ಧರ್ಮಪಾಲ ಕೊಯಿಂಗಾಜೆ, ಅಶ್ರಫ್ ಗುಂಡಿ, ಪರಮೇಶ್ವರ ಕೆಂಬಾರೆ, ತೀರ್ಥರಾಮ ಜಾಲ್ಸೂರು, ಜಯಪ್ರಕಾಶ್ ನೆಕ್ರೆಪ್ಪಾಡಿ, ತಾ.ಪಂ. ಮ್ಯಾನೇಜರ್ ಜಯಲಕ್ಷಿತ್ರ್ಮೕ, ಕಂದಾಯ ಮತ್ತು ಇತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಫೋಟೋ...17ಎಸ್ ಯುಎಲ್ -ಸುಳ್ಯದಲ್ಲಿವಿಶ್ವಕರ್ಮ ಜಯಂತಿ ಆಚರಣೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು.