**(ಸ್ಟೋರಿ) ಬುಡಕಟ್ಟು ಸಮುದಾಯಕ್ಕಿಲ್ಲಕಿಟ್ ಭಾಗ್ಯ ರಾಜ್ಯದ 9 ಜಿಲ್ಲೆಗಳಲ್ಲಿ8 ತಿಂಗಳಿಂದ ಪೌಷ್ಟಿಕ ಆಹಾರ ಪ್ಯಾಕೇಜ್ ಗೆ ತತ್ವಾರ

Contributed bymahammed.arif@timesgroup.com|Vijaya Karnataka
no distribution of nutritious food packages to tribal communities for 8 months
ಮುಹಮ್ಮದ್ ಆರಿಫ್ ಮಂಗಳೂರು

ಞahaಞಞಛಿd.a್ಟಜ್ಛಿಃಠಿಜಿಞಛಿsಟ್ಛಜ್ಞಿdಜಿa.್ಚಟಞ
ಜೇನುಕುರುಬ, ಮಲೆಕುಡಿಯ, ಕೊರಗ ಸೇರಿದಂತೆ ಅಳಿವಿನಂಚಿನಲ್ಲಿರುವ ಬುಡಕಟ್ಟು ಸಮುದಾಯಗಳಿಗೆ ನೀಡುತ್ತಿದ್ದ ಪೌಷ್ಟಿಕ ಆಹಾರದ ಕಿಟ್ ಕಳೆದ 8 ತಿಂಗಳಿಂದ ವಿತರಣೆಯಾಗಿಲ್ಲ.

ಆಹಾರ ಕಿಟ್ ಪೂರೈಸುತ್ತಿದ್ದ ಗುತ್ತಿಗೆದಾರರ ಟೆಂಡರ್ ಅವಧಿ ಮುಗಿದ ಹಿನ್ನೆಲೆಯಲ್ಲಿಹೊಸ ಟೆಂಡರ್ ಪ್ರಕ್ರಿಯೆ ನಡೆಯದೆ ಸಮಸ್ಯೆ ಎದುರಾಗಿದ್ದು, ಇದರಿಂದ ಕರಾವಳಿ ಸೇರಿದಂತೆ ರಾಜ್ಯಾದ್ಯಂತ 9 ಜಿಲ್ಲೆಗಳ ಬುಡಕಟ್ಟು ನಿವಾಸಿಗಳು ಆಹಾರ ಕಿಟ್ ಗಾಗಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕರಾವಳಿಯ ಮೂಲ ನಿವಾಸಿಗಳಾದ ಕೊರಗ, ಮಲೆಕುಡಿಯ ಸೇರಿದಂತೆ ಜೇನುಕುರುಬ, ಕಾಡು ಕುರುಬ, ಸೋಲಿಗ, ಯರವ, ಕುಡಿಯ, ಸಿದ್ಧಿ, ಹಸ್ಲರು, ಗೌಡಲು, ಗೊಂಡ ಹಾಗೂ ಬೆಟ್ಟ ಕುರುಬ ಕುಟುಂಬಗಳಿಗೆ ಪ್ರತೀ ತಿಂಗಳು ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ(ಐಟಿಡಿಪಿ) ಮೂಲಕ ಪೌಷ್ಟಿಕ ಆಹಾರದ ಕಿಟ್ ವಿತರಿಸಲಾಗುತ್ತಿತ್ತು.

ರಾಜ್ಯಮಟ್ಟದ ಟೆಂಡರ್ ಪ್ರಕ್ರಿಯೆ ಮೂಲಕ ಆಹಾರ ಕಿಟ್ ವಿತರಿಸಲಾಗುತ್ತಿದ್ದು, ಟೆಂಡರ್ ಅವಧಿ ಜನವರಿಗೆ ಮುಗಿದಿದೆ. ಟೆಂಡರ್ ಪ್ರಕ್ರಿಯೆಗೆ ಕಾನೂನು ಸಮಸ್ಯೆ ಎದುರಾಗಿರುವ ಕಾರಣ ಪೂರೈಕೆ ಸ್ಥಗಿತಗೊಂಡಿದೆ. ಬುಡಕಟ್ಟು ನಿವಾಸಿಗಳಿಗೆ ತೊಂದರೆ ಆಗಬಾರದು ಎಂದು ಹಿಂದಿನ ಟೆಂಡರ್ ಮೂಲಕವೇ ಪೂರೈಕೆ ಮುಂದುವರಿಸಲು ಅನುಮೋದನೆ ನೀಡಿದರೂ, ಇನ್ನೂ ಜಿಲ್ಲಾಮಟ್ಟದ ಐಟಿಡಿಪಿ ಇಲಾಖೆಗಳಿಗೆ ಆದೇಶ ಬಂದಿಲ್ಲ.

ಪೌಷ್ಟಿಕ ಆಹಾರವನ್ನೇ ನೆಚ್ಚಿಕೊಂಡಿರುವ ಬುಡಕಟ್ಟು ನಿವಾಸಿಗಳು ತಮ್ಮ ಸಮುದಾಯದ ಮುಖಂಡರು ಹಾಗೂ ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದಾರೆ. ಮಳೆಗಾಲ ಆರಂಭವಾಗಿದ್ದು, ಪೌಷ್ಟಿಕ ಆಹಾರ ಕೊರತೆ ಮೂಲನಿವಾಸಿಗಳನ್ನು ಕಾಡುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಮಾರ್ಚ್ ಬಳಿಕ ಕಿಟ್ ವಿತರಣೆ ಸ್ಥಗಿತಗೊಂಡಿದ್ದರೆ, ಉಡುಪಿ ಜಿಲ್ಲೆಯಲ್ಲಿಫೆಬ್ರವರಿ ಬಳಿಕ ವಿತರಣೆಯಾಗಿಲ್ಲ.

ದ.ಕ. ಜಿಲ್ಲೆಯಲ್ಲಿ1,215 ಕೊರಗ, 1,800 ಮಲೆಕುಡಿಯ ಸೇರಿದಂತೆ 3,015 ಕುಟುಂಬಗಳಿಗೆ ಮತ್ತು ಉಡುಪಿಯಲ್ಲಿ2,670 ಕೊರಗ ಹಾಗೂ 450 ಮಲೆಕುಡಿಯ ಸೇರಿ ಒಟ್ಟು 3,120 ಬುಡಕಟ್ಟು ಕುಟುಂಬಗಳಿಗೆ ಪೌಷ್ಟಿಕ ಆಹಾರ ಕಿಟ್ ವಿತರಿಸಲಾಗುತ್ತಿತ್ತು.

ಕಿಟ್ ನಲ್ಲಿಏನಿದೆ?: 8 ಕೆಜಿ ಅಕ್ಕಿ, 2 ಕೆಜಿ ತೊಗರಿಬೇಳೆ, 2 ಲೀ. ಎಣ್ಣೆ, ಅರ್ಧ ಲೀ. ನಂದಿನಿ ತುಪ್ಪ, ಹೆಸರು, ಹುರುಳಿ, ಅಲಸಂಡೆ, ಕಡಲೆ ಕಾಳು, ಬೆಲ್ಲಮತ್ತು ಸಕ್ಕರೆ ತಲಾ 1 ಕೆಜಿ ಹಾಗೂ 30 ಮೊಟ್ಟೆ ಪ್ರತೀ ಕುಟುಂಬಕ್ಕೆ ಮಾಸಿಕವಾಗಿ ಪೂರೈಕೆ ಮಾಡಲಾಗುತ್ತದೆ.

2008ರಲ್ಲಿಆರಂಭ: ಅಳಿವಿನಂಚಿನಲ್ಲಿರುವ ಪ್ರಮುಖ ಬುಡಕಟ್ಟು ಸಮುದಾಯ (ಪಿವಿಟಿಜಿ)ವೆಂದು ಗುರುತಿಸಿರುವ ಕೊರಗ, ಜೇನುಕುರುಬ ಸೇರಿದಂತೆ 9 ಜಿಲ್ಲೆಗಳ ಬುಡಕಟ್ಟು ನಿವಾಸಿಗಳ ಆರೋಗ್ಯ ಸುಧಾರಣೆ ದೃಷ್ಟಿಯಿಂದ ರಾಜ್ಯ ಸರಕಾರ 2008ರಲ್ಲಿವಷÜರ್ ದ ಆರು ತಿಂಗಳ ಅವಧಿಗೆ ಪ್ರತೀ ತಿಂಗಳು ಪೌಷ್ಟಿಕ ಆಹಾರ ಕಿಟ್ ಒದಗಿಸುವ ಯೋಜನೆ ಆರಂಭಿಸಿತ್ತು. ಸಿದ್ದರಾಮಯ್ಯ ಎರಡನೇ ಅವಧಿಗೆ ಸಿಎಂ ಆಗುವ ಸಂದರ್ಭ ಬುಡಕಟ್ಟು ನಿವಾಸಿಗಳಿಗೆ ವರ್ಷದ 12 ತಿಂಗಳೂ ಪೌಷ್ಟಿಕ ಆಹಾರ ನೀಡುವಂತೆ ಆದೇಶಿಸಿದ್ದರು.

ಕೋಟ್

ರಾಜ್ಯ ಸರಕಾರ ಬುಡಕಟ್ಟು ಜನಾಂಗಕ್ಕೆ 6 ತಿಂಗಳು ನೀಡುತ್ತಿದ್ದ ಪೌಷ್ಟಿಕ ಆಹಾರವನ್ನು 12 ತಿಂಗಳಿಗೆ ವಿಸ್ತರಿಸಿದ್ದರೂ, ಮಾರ್ಚ್ ಬಳಿಕ ಪೂರೈಕೆಯಾಗಿಲ್ಲ. ಸಮುದಾಯದ ಜನರು ಪ್ರತಿದಿನ ಪ್ರಶ್ನಿಸುತ್ತಿದ್ದಾರೆ. ಸರಕಾರ ತಕ್ಷಣ ಪೌಷ್ಟಿಕ ಆಹಾರ ಪೂರೈಕೆ ಪುನಾರಂಭಿಸಬೇಕು.

-ಸುಂದರ ಕೊರಗ, ಅಧ್ಯಕ್ಷ, ದ.ಕ. ಜಿಲ್ಲಾಕೊರಗ ಸಂಘ.

ಕೋಟ್

ಕೊರಗ ಸೇರಿದಂತೆ ಆದಿವಾಸಿ ಬುಡಕಟ್ಟು ಸಮುದಾಯದ ಆಹಾರ ಕಿಟ್ ಪೂರೈಕೆ ಬಾರದೆ 6 ತಿಂಗಳಾಗಿರುವುದು ದುರದೃಷ್ಟಕರ. ಈ ಕುರಿತು ಪತ್ರ ಬರೆಯಲಾಗಿದೆ. ಶೀಘ್ರ ಪೂರೈಕೆಯಾಗುವ ನಿರೀಕ್ಷೆ ಇದೆ.

-ದರ್ಶನ್ ಎಚ್ .ವಿ., ದ.ಕ. ಜಿಲ್ಲಾಧಿಕಾರಿ.