ಮಹಾತ್ಮ ಗಾಂಧೀಜಿ ತತ್ವಾದರ್ಶ ಮಕ್ಕಳಿಗೆ ತಿಳಿಸಿ

Contributed bydantkalesanjay@gmail.com|Vijaya Karnataka

ಹುಮನಾಬಾದ್‌ನಲ್ಲಿಗಾಂಧೀಜಿಯವರ ತತ್ವಾದರ್ಶಗಳ ಕುರಿತು ವಿಶೇಷ ಉಪನ್ಯಾಸ ನಡೆಯಿತು. ಯಾರನ್ನೂ ದ್ವೇಷಿಸದಿರುವ ಗಾಂಧೀಜಿಯವರ ಮನೋಧರ್ಮದ ಬಗ್ಗೆ ವೀರಂತರೆಡ್ಡಿ ಜಂಪಾ ಮಾತನಾಡಿದರು. ಗಾಂಧೀಜಿಯವರ ವಿಚಾರಗಳು ಇಂದಿಗೂ ಲಭ್ಯವಿವೆ. ಅವರ ತತ್ವಗಳನ್ನು ಮಕ್ಕಳಿಗೆ ಕಲಿಸುವುದು ಅನಿವಾರ್ಯ ಎಂದು ಪ್ರಾಚಾರ್ಯ ಪ್ರೊ.ರವೀಂದ್ರನಾಥಪ್ಪ ಕೆ ಹೇಳಿದರು. ಸಾಹಿತಿ ಶಕೀಲ್‌ ಐ.ಎಸ್‌ ಉಪನ್ಯಾಸ ನೀಡಿದರು.

informing mahatma gandhis ideals to children

ವಿಕ ಸುದ್ದಿಲೋಕ ಹುಮನಾಬಾದ್ ಯಾರನ್ನೂ ದ್ವೇಷಿಸದಿರುವ ಮನೋಧರ್ಮದ ತಾತ್ವಿಕತೆಯನ್ನು ಗಾಂಧೀಜಿಯ ಬರಹಗಳಲ್ಲಿಕಾಣಬಹುದು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ವೀರಂತರೆಡ್ಡಿ ಜಂಪಾ ಹೇಳಿದರು ಪಟ್ಟಣದ ಎಸ್ ಬಿಸಿಎಸ್ ಕಲಾ ಮತ್ತು ಎಸ್ ವಿ ವಾಣಿಜ್ಯ, ವಿಜ್ಞಾನ ಕಾಲೇಜಿನಲ್ಲಿಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ಕಾರ್ಯಕ್ರಮ ದಲ್ಲಿ

ಮಹಾತ್ಮಾ ಗಾಂಧಿಜಿ ಅವರ ಸರ್ವೋದಯ ತತ್ವದ ಮಹತ್ವ ಕುರಿತು ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗಾಂಧೀಜಿ ಅವರು ತಮ್ಮ ಭಾವನೆ, ಅನಿಸಿಕೆ, ತಾತ್ವಿಕ ಚಿಂತನೆ, ಹೋರಾಟ ಮಾರ್ಗದ ಬಗ್ಗೆ ಎಲ್ಲವನ್ನೂ ಹಿಂದಿ, ಗುಜರಾತಿ ಮತ್ತು ಇಂಗ್ಲಿಷ್ ನಲ್ಲಿಪತ್ರಿಕೆಗಳ ಮೂಲಕ ತಿಳಿಸುತ್ತಿದ್ದರು. ಆ ಕಾರಣದಿಂದ ಅವರ ವಿಚಾರದೆಳೆಗಳು ಅನಂತವಾಗಿ ಇಂದಿಗೂ ಅಚ್ಚಿನ ಪ್ರತಿಗಳಲ್ಲಿಲಭ್ಯವಾಗಿವೆ ಎಂದರು. ಪ್ರಾಚಾರ್ಯ ಪ್ರೊ.ರವೀಂದ್ರನಾಥಪ್ಪ ಕೆ ಮಾತನಾಡಿ, ಗಾಂಧೀಜಿಯವರ ತತ್ವಗಳು ಇಂದಿನ ಮಕ್ಕಳ ಕಲಿಸುವದು ಬಹಳ ಅನಿವಾರ್ಯವಾಗಿದೆ. ಅವರಲ್ಲಿಅರಿವು ಮೂಡಿಸುವ

ಪ್ರಯತ್ನವನ್ನು ಮಾಡಬೇಕು ಎಂದು ಹೇಳಿದರು. ಕಸಾಪ ಮಾಜಿ ಅಧ್ಯಕ್ಷ ರವೀಂದ್ರಕುಮಾರ ಭಂಡಾರಿ ಮತನಾಡಿದರು. ಸಾಹಿತಿ ಶಕೀಲ್ ಐ.ಎಸ್ ಉಪನ್ಯಾಸ ನೀಡಿದರು. ಚಕೋರ ಸಾಹಿತ್ಯ ಜಿಲ್ಲಾಸಂಚಾಲಕಿ ಡಾ ಮಕ್ತುಂಬಿ ಗೌರವ ಉಪಸ್ಥಿತರಿದ್ದರು. ಸಂಜೀವಿನಿ ಮತ್ತು ಭಾಗ್ಯಶ್ರೀ ಪ್ರಾರ್ಥಿಸಿದರು. ಪ್ರೊ.ದೀಪಕ ಕಲಬುರಗಿ ನಿರೂಪಿಸಿದರು. ಪ್ರೊ. ಪ್ರವೀಣ ಈಶ್ವರ ಕಲಬುರಗಿ ಸ್ವಾಗತಿಸಿದರು. ಡಾ.ಸಂಗಪ್ಪ ತೌಡಿ ವಂದಿಸಿದರು.