ನ.30ಕ್ಕೆ ಕೆಎಸ್ ಸಿಎ ಚುನಾವಣೆ

Contributed bymanjunath.gowda@timesgroup.com|Vijaya Karnataka

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಚುನಾವಣೆ ನವೆಂಬರ್‌ 30ರಂದು ನಡೆಯಲಿದೆ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶುಭೇಂದು ಘೋಷ್‌ ಈ ದಿನಾಂಕವನ್ನು ಖಚಿತಪಡಿಸಿದ್ದಾರೆ. ಹಿಂದಿನ ಎರಡು ಸಭೆಗಳಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಮಾಜಿ ಕ್ರಿಕೆಟಿಗರ ನಿಯೋಗವು ಶೀಘ್ರ ಚುನಾವಣೆ ನಡೆಸುವಂತೆ ಒತ್ತಾಯಿಸಿತ್ತು. ಕೆಲವರ ಉಮೇದುವಾರಿಕೆ ತಿರಸ್ಕರಿಸುವ ಆರೋಪಗಳನ್ನು ಸಿಇಒ ತಳ್ಳಿಹಾಕಿದ್ದಾರೆ. ಬಿಸಿಸಿಐ ಸದಸ್ಯತ್ವ ಕಳೆದುಕೊಳ್ಳದಿರುವುದು ಸಂಸ್ಥೆಯ ಮೊದಲ ಆದ್ಯತೆಯಾಗಿದೆ.

ksca election date announced november 30

ವಿಕ ಸುದ್ದಿಲೋಕ ಬೆಂಗಳೂರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ

(ಕೆಎಸ್ ಸಿಎ) ಚುನಾವಣೆ ನವೆಂಬರ್ 30ರಂದು ನಡೆಯಲಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಂಗಳವಾರ ಘೋಷಿಸಿದ್ದಾರೆ. ರಘುರಾಮ್ ಭಟ್ ನೇತೃತ್ವದ ಸಮಿತಿಯ ಅಧಿಕಾರಾವಧಿ ಸೆಪ್ಟೆಂಬರ್ 30ರಂದು ಕೊನೆಗೊಂಡಿದ್ದರೂ ಚುನಾವಣೆಯ ದಿನಾಂಕವನ್ನು ಘೋಷಿಸುಧಿವಲ್ಲಿವಿಳಂಬವಾದ ಕಾರಣ ರಾಜ್ಯ ಕ್ರಿಕೆಟ್ ವಲಯಗಳಲ್ಲಿಹಲವು ಗೊಂದಲಕ್ಕೆ ಕಾರಣವಾಗಿತ್ತು. ‘‘ಹಿಂದಿನ ಎರಡು ಸಭೆಗಳಲ್ಲಿನಿರ್ಧರಿಸಿದಂತೆ, ಕೆಎಸ್ ಸಿಎ ಚುನಾವಣೆಯು 2025ರ ನ.30ರಂದು ನಡೆಯಲಿದೆ,’’ ಎಂದು ಕೆಎಸ್ ಸಿಎ ಸಿಇಒ ಶುಭೇಂದು ಘೋಷ್ ಇಧಿ-ಮೇಲ್ ಮೂಲಕ ಮಾಹಿತಿ ನೀಡಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ , ಕೆಎಸ್ ಸಿಎ ಮಾಜಿ ಖಜಾಂಚಿ ವಿನಯ್ ಮೃತ್ಯುಂಜಯ, ಭಾರತ ಮಹಿಳಾ ತಂಡದ ಮಾಜಿ ಆಟಗಾರ್ತಿ ಶಾಂತ ರಂಗಸ್ವಾಮಿ ಅವರನ್ನೊಳಗೊಂಡ ನಿಯೋಗ, ರಾಜ್ಯ ಸಂಸ್ಥೆಗೆ ಶೀಘ್ರ ಚುನಾವಣೆ ನಡೆಸಬೇಕು. ಈ ಸಂಬಂಧ ದಿನಾಂಕವನ್ನು ಕೂಡಲೇ ಘೋಷಿಸಬೇಕು ಎಂದು ಸೋಮವಾರಷ್ಟೇ ಆಗ್ರಹಿಸಿತ್ತು. ಇದೇ ವೇಳೆ, ಪ್ರಸಾದ್ ನೇತೃತ್ವದ ನಿಯೋಗವು ತನ್ನ ಕೆಲವು ಸ್ಪರ್ಧಿಗಳ ಉಮೇದುವಾರಿಕೆಯನ್ನು ತಳ್ಳಿಹಾಕುವ ಪ್ರಯತ್ನದ ಬಗ್ಗೆ ಪ್ರಶ್ನೆಗಳನ್ನು ಎತ್ತಿತ್ತು. ಆದರೆ ಕೆಎಸ್ ಸಿಎಯ ಸಿಇಒ ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ. ‘‘ಯಾವುದೇ ಅರ್ಹ ವ್ಯಕ್ತಿ ಚುನಾವಣೆಯಲ್ಲಿಸ್ಪರ್ಧಿಸಲು ನಮಗೆ ಯಾವುದೇ ಆಕ್ಷೇಪಣೆ ಇಲ್ಲ. ಕೆಲವರನ್ನು ಸ್ಪರ್ಧಿಸದಂತೆ ತಡೆಯುತ್ತಿದ್ದೇವೆ ಎಂಬ ಹೇಳಿಕೆ ನಿಜವಲ್ಲ,’’ ಎಂದು ಪತ್ರದಲ್ಲಿತಿಳಿಸಲಾಗಿದೆ. ಬಿಸಿಸಿಐ ಸದಸ್ಯತ್ವವನ್ನು ಕಳೆದುಕೊಳ್ಳದಿರುವುದು ಈಗ ಸಂಸ್ಥೆಯ ಮೊದಲ ಆದ್ಯತೆಯಾಗಿದೆ ಎಂದು ಹೇಳಿಕೆಯಲ್ಲಿತಿಳಿಸಲಾಗಿದೆ.