ಪಕ್ಷದ ಸಂಘಟನೆ ಬಲಪಡಿಸಿ
ವಿಕ ಸುದ್ದಿ ಲೋಕ ಗಂಗಾವತಿ
‘‘ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸಬೇಕು,’’ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿನಡೆದ ಎಸ್ .ಟಿ.ಮೋರ್ಚಾ ನಗರ ಮಂಡಲ ಉಪಾಧ್ಯಕ್ಷರ ಆಯ್ಕೆ ಕಾರ್ಯಕ್ರಮದಲ್ಲಿಮಾತನಾಡಿದರು
‘‘ಏ.6 ರಿಂದ ನೇಮಕಾತಿ ಜಾರಿಗೆ ಬಂದಿದ್ದು, ಹೊಸದಾಗಿ ನೇಮಕಗೊಂಡ ಪದಾಧಿಕಾರಿಗಳು ಪಕ್ಷದ ನಿಯಮಾವಳಿ ಹಾಗೂ ಮಾರ್ಗಸೂಚಿಗಳಂತೆ
ಕಾರ್ಯನಿರ್ವಹಿಸಿ, ಸಂಘಟನೆಯ ಅಭಿವೃದ್ಧಿಗೆ ಕೈಜೋಡಿಸಬೇಕು,’’ ಎಂದು ಸೂಚಿಸಿದರು. ನಗರ ಮಂಡಲ ಉಪಾಧ್ಯಕ್ಷರಾಗಿ ಎಂ.ಬಸಪ್ಪ ನಾಯಕ್ ಅವರನ್ನು ಆಯ್ಕೆ ಮಾಡಲಾಯಿತು.
ಧಿ
12Ãñಣ02: ಗಂಗಾವತಿ ಬಿಜೆಪಿ ನಗರ ಮಂಡಲ ಉಪಾಧ್ಯಕ್ಷರಾಗಿ ಆಯ್ಕೆಯಾದ ಎಂ.ಬಸಪ್ಪ ನಾಯಕ್ ಅವರಿಗೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಆದೇಶ ಪತ್ರ ನೀಡಿದರು.

