(14 ಜಿಕೆಕೆ-2):
ಆರ್ ಎಸ್ ಎಸ್ ಮತ್ತು ಬಿಜೆಪಿ ಬಗ್ಗೆ ಹಗುರವಾಗಿ ಮಾತನಾಡಿದ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗೋಕಾಕ ಸಿಪಿಐ ಸುರೇಶಬಾಬು ಆರ್ .ಬಿ. ಅವರಿಗೆ ಬಿಜೆಪಿ ಯುವ ಮೋರ್ಚಾ ನಗರ ಮಂಡಲ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ, ಯುವ ಮೋರ್ಚಾ ನಗರ ಅಧ್ಯಕ್ಷ ಈರಣ್ಣ ಅಂಬಲಿ, ರಾಜೇಶ್ವರಿ ವಡೆಯರ, ಪ್ರಭು ರಾವಳೋಜಿ, ಕೆ.ಎಸ್ . ಸುಭಂಜಿ, ಮೋಹನ ವಾಳವೇಕರ, ದರ್ಶನ ಗುಡ್ಡಾಕಾರ, ಗೋಪಾಲ ಗೋಣಿ ಮತ್ತಿತರರು ಉಪಸ್ಥಿತರಿದ್ದರು.

