ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಿಸಿ
ವಿಕ ಸುದ್ದಿಲೋಕ ಹೊಳೆಹೊನ್ನೂರು
ಭದ್ರಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಶನಿವಾರ ಸಮುದಾಯದತ್ತ ಶಾಲೆ ಕಾರ ್ಯಕ್ರಮ ಯಶಸ್ವಿಯಾಗಿ ನಡೆಸಲಾಯಿತು.
ಎಸ್ ಡಿಎಂಸಿ ಅಧ್ಯಕ್ಷ ಬಿ.ಎಸ್ .ಹರೀಶ್ ಉದ್ಘಾಟಿಸಿ ಮಾತನಾಡಿ, ನಮ್ಮ ಗ್ರಾಮದ ಸರಕಾರಿ ಶಾಲೆಯಲ್ಲಿಶಿಕ್ಷಕರು ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ 1ರಿಂದ 5ನೇ ತರಗತಿವರೆಗೆ ದ್ವಿಭಾಷಾ ಆಂಗ್ಲಮಾಧ್ಯಮ ತರಗತಿ ಆರಂಭಿಸಲಾಗುತ್ತಿದೆ. ಇದರ ಸದುಪಯೋಗ ಪಡೆಯಲು ಪಾಲಕ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಿಸಬೇಕು ಎಂದರು.
ಮುಖ್ಯ ಶಿಕ್ಷಕ ಪಿ.ಕೆ.ರಮೇಶ ಮಾತನಾಡಿ, ದ್ವಿಭಾಷಾ ತರಗತಿಗಳು ಪರಿಣಾಮಕಾರಿಯಾಗಿ ಬೋಧಿಸಲು ಇಲಾಖೆಯಿಂದ ಶಿಕ್ಷಕರಿಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ. ಸ್ಥಳೀಯ ಶಾಲೆಯಲ್ಲಿಯೇ ಉತ್ತಮ ಶಿಕ್ಷಣ ಹಾಗೂ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಶೃತಿ, ಪೋಷಕರಾದ ಭಾರತಿ, ರೇವಣಪ್ಪ, ಲಕ್ಷತ್ರ್ಮಣಪ್ಪ, ಸಿಬ್ಬಂದಿ ನೇತ್ರಾವತಿ, ಕವಿತಾ ಹಾಗೂ ಶಿಲ್ಪಾ ಹಾಜರಿದ್ದರು.
ಶಾಲೆ ವಿದ್ಯಾರ್ಥಿನಿ ಬಿಂದುಶ್ರೀ, ಪ್ರೇಕ್ಷಾ ಹಾಗೂ ಪ್ರತೀಕ್ಷಾ ಪ್ರಾಥಿಸಿದರು. ಸಹಶಿಕ್ಷಕಿ ದೀಪಾ ಸ್ವಾಗತಿಸಿ, ಕೃಷ್ಣಮೂರ್ತಿ ವಂದಿಸಿದರು.
ಫೊಟೋ ಫೈಲ್ : 13ಎಚ್ ಎಚ್ ಆರ್ 2
ಹೊಳೆಹೊನ್ನೂರು ಸಮೀಪದ ಭದ್ರಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಸಮುದಾಯ ದತ್ತ ಶಾಲೆ ಕಾರ ್ಯಕ್ರಮ ನಡೆಯಿತು.

